ಭರತನಾಟ್ಯ ಸಾಧಕಿಗೆ – ಗೋಲ್ಡನ್‌ ಮುಕುಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭರತನಾಟ್ಯ ಸಾಧಕಿಗೆ – ಗೋಲ್ಡನ್‌ಮುಕುಟ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ಮಾಡುವ ಮೂಲಕ ವಿಶ್ವದಾಖಲೆ ಬರೆದ ಕುಮಾರಿ ವಿದುಷಿ ದೀಕ್ಷಾ ವಿ. ಅವರನ್ನು ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸನ್ಮಾನಿಸಿದರು.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಮುಂಡ್ಕಿನಜಡ್ಡು ಗ್ರಾಮದ ವಿದುಷಿ ದೀಕ್ಷಾ ವಿ. ಸಾಧನೆ ಪ್ರತಿಯೊಬ್ಬರೂ ಹೆಮ್ಮೆಪಡುವಂತದ್ದು. ಧೈರ್ಯ, ಇಚ್ಛೆ, ಸಂಕಲ್ಪದಿಂದ ಸಾಧನೆ ಮಾಡಿರುವ ನಾಟ್ಯ ಕಲಾವಿದೆಗೆ ಶುಭವಾಗಲಿ ಎಂದು ಡಿಸಿಎಂ ಶಿವಕುಮಾರ್ ಹಾರೈಸಿದರು.

- Advertisement - 

 

- Advertisement - 
Share This Article
error: Content is protected !!
";