ಚಂದ್ರವಳ್ಳಿ ನ್ಯೂಸ್, ಬೆಂಗಳೂರು
“ಕರ್ನಾಟಕದ ಅಭಿವೃದ್ಧಿ ಅಂಧಕಾರದಲ್ಲಿ – ಸರ್ಕಾರಿ ಕಚೇರಿಗಳು ಕತ್ತಲಲ್ಲಿ” ಬಿಜೆಪಿ ತಿಳಿಸಿದೆ.
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅದ್ಯಾವ ಪರಿ ದಿವಾಳಿ ಮಾಡಿದೆ ಎಂದರೆ, ಸರ್ಕಾರಿ ಕಚೇರಿಗಳಿಗೆ ವಿದ್ಯುತ್ಬಿಲ್ಸಹ ಪಾವತಿಸಲು ಆಗುತ್ತಿಲ್ಲ!! ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ವಿದ್ಯುತ್ಬಿಲ್ ಪಾವತಿಸದ ಕಾರಣ ಸರ್ಕಾರಿ ಕಚೇರಿಗಳ ವಿದ್ಯುತ್ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಆಡಳಿತ ಹೀಗೆ ಮುಂದುವರೆದರೆ, ನಾಳೆ ವಿಧಾನಸೌಧ, ವಿಕಾಸಸೌಧ, ಕಾವೇರಿ, ಕೃಷ್ಣಾದಲ್ಲಿಯೂ ಸಹ ವಿದ್ಯುತ್ಸಂಪರ್ಕವನ್ನು ಕಡಿತಗೊಳಿಸಿದರೂ ಅಚ್ಚರಿಯಿಲ್ಲ!! ಎಂದು ಬಿಜೆಪಿ ಹೇಳಿದೆ.