ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಿರುವ ಸಿಎಂ ಆಕಾಂಕ್ಷಿಗಳ ಪಟ್ಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳೆಯುತ್ತಲೇ ಇದೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ,

ಶಾಮನೂರು ಶಿವಂಕರಪ್ಪ, ಶರಣಬಸಪ್ಪ ಗೌಡ ದರ್ಶನಾಪುರ, ಇಷ್ಟು ಜನ ಸಿಎಂ ಕುರ್ಚಿ ಮೇಲೆ ಈಗಾಗಲೇ ಟವಲ್ ಹಾಕಿ ಕಾಯುತ್ತಿರುವಾಗ ಈಗ ಕೆ.ಹೆಚ್.ಮುನಿಯಪ್ಪನವರು ನಾನೇಕೆ ಸಿಎಂ ಆಗಬಾರದುಎನ್ನುವ ಮೂಲಕ ನಾನೂ ಸಿಎಂ ಆಕಾಂಕ್ಷಿ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

- Advertisement - 

ಒಟ್ಟಿನಲ್ಲಿ ಇಡೀ ಕರ್ನಾಟಕ ಕಾಂಗ್ರೆಸ್  ಪಕ್ಷ ಸಿಎಂ ಸಿದ್ದರಾಮಯ್ಯನವರು ಯಾವಾಗ ರಾಜೀನಾಮೆ ಕೊಡುತ್ತಾರೋ ಎಂದು ಕಾತರದಿಂದ ಕಾಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

 

- Advertisement - 

 

Share This Article
error: Content is protected !!
";