ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮೈಸೂರು ಗೋವಿಂದಪ್ಪ ಇವರ ಪತ್ನಿ ಶ್ರೀಮತಿ ಹಾಲಜ್ಜಿ(98) ವಯೋ ಸಹಜದಿಂದ ಮಂಗಳವಾರ ಸಂಜೆ ಮೃತಪಟ್ಟಿರುತ್ತಾರೆ.
ವಿಶ್ರಾಂತ ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ಜಿ.ತಿಮ್ಮಾರೆಡ್ಡಿ, ನಿಕಟಪೂರ್ವ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಕೆ.ಜಿ ಮೂಡಲಗಿರಿಯಪ್ಪ ಸೇರಿದಂತೆ 5 ಗಂಡು ಮೂರು ಮಂದಿ ಪುತ್ರಿಯರು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಅಕ್ಟೋಬರ್-22 ರಂದು ಬುಧವಾರ ಮಧ್ಯಾಹ್ನ 1.30ಕ್ಕೆ ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ಕುಂಚಿಟಿಗ ಸಮುದಾಯದ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

