ತಾಲೂಕಿನೆಲ್ಲೆಡೆ ಹನುಮ ಜಯಂತಿಯ ಸಂಭ್ರಮ ಸಡಗರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹನುಮ ಜಯಂತಿ ಪ್ರಯುಕ್ತ ತಾಲೂಕಿನಾದ್ಯಂತ ಆಂಜನೇಯ ದೇಗುಲಗಳಲ್ಲಿ ಹನುಮ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿತು.

ನಗರದ ತೇರಿನ ಬೀದಿಯ ಅರಳು ಮಲ್ಲಿಗೆ ಬಾಗಿಲು ವಿಶ್ವೇಶ್ವರಯ್ಯ ವೃತ್ತದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಸ್ಥಾನ ಜೀರ್ಣದ್ದಾರ ಸಮಿತಿ ಹಾಗೂ ಪ್ರಸನ್ನ ಆಂಜನೇಯ ಯುವಕ ಮಂಡಲಿ ವತಿಯಿಂದ ಹನುಮ ಜಯಂತಿ ಅಂಗವಾಗಿ ಸ್ವಾಮಿಗೆ ಬೆಳಿಗ್ಯೆ ಮಹಾಭಿಷೇಕ,

- Advertisement - 

ವಿಶೇಷ ಹೂವಿನ ಅಲಂಕಾರ, ಹತ್ತು ಗಂಟೆಗೆ ಭಕ್ತರಿಂದ ವಿಷ್ಣು ಸಹಸ್ರ ನಾಮ ಪಾರಾಯಣ, ಭಜನಾವಳಿ ಪ್ರಸಾದ ವಿನಿಯೋಗ ನಡೆಯಿತು. ಮದ್ಯಾನ್ಹ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಬೆಳ್ಳಿ ರಥ ದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮುಖ್ಯ ಪ್ರಾಣ ದೇವರ ವಿಶೇಷ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ನೆಲದಾಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಯೆ 5 ಕ್ಕೆ ಸ್ವಾಮಿಗೆ ಪಂಚಾಮೃತಾಭಿಷೇಕ 7ಗಂಟೆಗೆ ಸುರಭಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ, ಶ್ರೀ ರಾಮ ತಾರಕ ಹೋಮ, ಸಂಜೆ ವಿಶೇಷ ಅಲಂಕಾರ ಪೂಜೆಗಳೊಂದಿಗೆ ದೇವರ ಪ್ರಾಕಾರೋತ್ಸವ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.

- Advertisement - 

ರೋಜಿಪುರ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಹನ್ನೊಂದು ದಿನಗಳಿಂದ ನಿರಂತರ ಹಗಲು ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನಾವಳಿ ನಡೆಯಿತು. ಡಿ. 1ರಂದು ಸಂಜೆ ಸೀತಾರಾಮ ಕಲ್ಯಾಣೋತ್ಸವ ಡಿ. 2 ರಂದು ವಿಶೇಷ ಅಲಂಕಾರ ಪೂಜೆಗಳೊಂದಿಗೆ ಮದ್ಯಾನ್ಹ ರಥೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ರೈಲ್ವೇ ಸ್ಟೇಷನ್, ಖಾಸ್ಭಾಗ್, ಸಿದ್ದೇ ನಾಯ್ಕನ ಹಳ್ಳಿ, ಶಿವಪುರ ಗೇಟ್,ಕೊಂಗಾಡಿಯಪ್ಪಕಾಲೇಜ್ ರಸ್ತೆಯ ಬಯಲು ಬಸವಣ್ಣ ದೇವಾಲಯ, ರಾಗರಾಯನ ಗುಟ್ಟೆ, ರಂಗಪ್ಪ ಸರ್ಕಲ್, ರಾಜಘಟ್ಟ, ಕೊಡಿಗೇಹಳ್ಳಿ, ಮಜುರಾ ಹೊಸಹಳ್ಳಿ ಅರಳು ಮಲ್ಲಿಗೆ ಕೆರೆ ಏರಿ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಹನುಮ ದೇಗುಲಗಳಲ್ಲಿ ವಿಶೇಷ ಪೂಜಾ ಅಲಂಕಾರಗಳು, ಪ್ರಸಾದ ವಿನಿಯೋಗ,

ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆದವು. ಭಕ್ತರು ಬೆಳಗ್ಯೆ ಯಿಂದ ರಾತ್ರಿಯವರೆಗೂ ಬಡ ಬಾಣಲನ ದರ್ಶನದೊಂದಿಗೆ ಭಕ್ತಿ ಬಾವದೊಂದಿಗೆ ಸಮ್ಪ್ರೀತರಾಗಿದ್ದು ವಿಶೇಷವೆನಿಸಿ ಹನುಮ ಜಯಂತಿಯ ಸಡಗರ ಎಲ್ಲೆಡೆ ಸಂಭ್ರಮಿಸಿತ್ತು.

 

 

 

Share This Article
error: Content is protected !!
";