ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನದಲ್ಲಿ ಹೆಚ್ಚು ಅಂಕ : ರಾಜ್ಯಕ್ಕೆ 2ನೇ ಸ್ಥಾನ ಪಡೆದ ಕವನ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಚಿನ್ಮಯ ಪಬ್ಲಿಕ್ ಪ್ರೌಢ ಶಾಲೆಯ ವಿದ್ಯಾರ್ಥಿ ಡಿ.ಕವನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೦೧ರಲ್ಲಿ ಕನ್ನಡ ವಿಭಾಗದಲ್ಲಿ ೯೮ ಅಂಕಗಳನ್ನು ಗಳಿಸಿದ್ದು ಮರುಮೌಲ್ಯಮಾಪನ ಮಾಡಿಸಿದಾಗ ಇವರಿಗೆ ಎರಡು ಅಂಕಗಳು ದೊರೆತಿದ್ದು ಕನ್ನಡಲ್ಲಿ ೧೦೦ ಅಂಕ ಪಡೆದಿರುತ್ತಾಳೆ.

- Advertisement - 

ಈ ವಿದ್ಯಾರ್ಥಿನಿ ಮೊದಲು ೬೨೫ಕ್ಕೆ ೬೨೨ ಗಣಿಸಿದ್ದು ಈಗ ೬೨೫ಕ್ಕೆ ೬೨೪ ಅಂಕವನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ಧಾಳೆಂದು ಮುಖ್ಯೋಪಾಧ್ಯಾಯಿನಿ ತ್ರಿವೇಣಿ ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement - 

ಎರಡು ಹೆಚ್ಚುವರಿ ಅಂಕ ಪಡೆದು ಫಲಿತಾಂಶದಲ್ಲಿ ಪ್ರಗತಿ ಸಾಧಿಸಿದ ವಿದ್ಯಾರ್ಥಿನಿ ಡಿ.ಕವನಗೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಜಂಟಿ ಕಾರ್ಯದರ್ಶಿ ಜಿ.ಎಸ್.ರಶ್ಮಿ ಸತೀಶ್‌ ಕುಮಾರ್, ಕಾರ್ಯದರ್ಶಿ ಜಿ.ಆರ್.ಶಕುಂತಲ, ಬೋಧಕ ವರ್ಗ  ಅಭಿನಂದಿಸಿದೆ.

 

- Advertisement - 

Share This Article
error: Content is protected !!
";