ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮುಗಲಭೆಗಳನ್ನು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಆ್ಯಂಟಿ ಕಮ್ಯೂನಲ್ ಫೋರ್ಸ್ಗೆ ಯಾವ ರೀತಿ ಪವರ್ ಕೊಡಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಅಲ್ಲದೆ ತಕ್ಷಣ ಜಾರಿಯಾಗುವಂತೆ ಆದೇಶ ಮಾಡಲಾಗಿದೆ. ಇಂಥಹ ಗಲಬೆಗಳ ವಿರುದ್ಧ ಕ್ರಮ ತಗೆದುಕೊಳ್ಳುತ್ತಾರೆ ಎಂದು ಡಾ ಪರಮೇಶ್ವರ್ ತಿಳಿಸಿದರು.
ಕರಾವಳಿ ಭಾಗವನ್ನು ಬಹಳ ಸೂಕ್ಷ್ಮವಾಗಿ ತೆಗೆದುಕೊಂಡಿದ್ದೇವೆ. ಉಡುಪಿ, ಶಿವಮೊಗ್ಗ, ಮಂಗಳೂರು ಸೇರಿ ಕಮ್ಯೂನಲ್ ಚಟುವಟಿಕೆ ಆಗುವ ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿದ್ದೇವೆ ಎಂದರು.
ಆ ಭಾಗದ ವಾತಾವರಣ ಕೆಟ್ಟು ಹೋಗಿದೆ ಎನ್ನುವುದಕ್ಕಿಂತ ಕೆಡಿಸಿಬಿಟ್ಟಿದ್ದಾರೆ. ದ್ವೇಷ ಭಾವನೆ ಮನೆ ಮಾಡಿದೆ. ಇದನ್ನು ತೊಡೆದು ಹಾಕಬೇಕಿದೆ. ಎಲ್ಲವೂ ಕೊನೆಯಾಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ರಾಜಕೀಯ ನಾಯಕರು ಘಟನೆಗಳ ಹಿಂದೆ ಇದ್ದಾರಾ? ಎನ್ನುವುದರ ಕುರಿತು ಪರಿಶೀಲನೆ ಮಾಡಿತ್ತೇವೆ. ಹತ್ಯೆ ಆದ ತಕ್ಷಣ ನಾಲ್ವರನ್ನು ಬಂಧಿಸಿದ್ದು ಆರೋಪಿತರ ಹೇಳಿಕೆಗಳಲ್ಲಿ ಗಂಭೀರವಾದ ಮಾಹಿತಿಗಳು ಸಿಕ್ಕಿದ್ದು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು.