ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವ ಡಾ.ಜಿ ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ತಂಡ ದಾಳಿ ಮಾಡಿದೆ ಎಂದು ಜೆಡಿಎಸ್ ತಿಳಿಸಿದೆ.
ನಟಿ ರನ್ಯಾ ರಾವ್ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ್ಅವರ ಪಾತ್ರವೂ ಇರುವುದು ಇಡಿ ದಾಳಿಯಿಂದ ಬಯಲಾಗುತ್ತಿದೆ.
ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ನಟಿ ರನ್ಯಾಗೂ, ಗೃಹ ಸಚಿವರ ಸಿದ್ಧಾರ್ಥ ಕಾಲೇಜಿನ ನಡುವೆ ಅಕ್ರಮವಾಗಿ ಹಣಕಾಸಿನ ವರ್ಗಾವಣೆ ನಡೆದಿದೆ. ರನ್ಯಾ ಗೋಲ್ಡ್ಸ್ಮಗ್ಲಿಂಗ್ಮಾಡಿಗಳಿಸಿರುವ ಹಣದ ಹೂಡಿಕೆಗಳ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಅಭಿಪ್ರಾಯಪಟ್ಟಿದೆ.