ತೋಟಗಾರಿಕೆ ತರಬೇತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
     ತೋಟಗಾರಿಕೆ ಇಲಾಖಾ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಕ್ಕೆ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಸ್ವೀಕೃತಿ ದಿನಾಂಕವನ್ನು ಏಪ್ರಿಲ್ 28 ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ.

      ತೋಟಗಾರಿಕೆ ತರಬೇತಿಗೆ ಸಂದರ್ಶನವು ಏಪ್ರಿಲ್ 28 ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯ ತೋಟಗಾರಿಕೆ ಇಲಾಖಾ ಸಭಾಂಗಣದಲ್ಲಿ ನಿಗಧಿಯಾಗಿದೆ.

      ತರಬೇತಿಗೆ ಆಯ್ಕೆಯಾದವರಿಗೆ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025 ಮೇ 02 ರಿಂದ 2026 ಫೆ.28 ರವರೆಗೆ 10 ತಿಂಗಳ ಕಾಲ ತೋಟಗಾರಿಕೆ ತರಬೇತಿ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Share This Article
error: Content is protected !!
";