ಗೋ ಕಳ್ಳತನ, ಲವ್‌ ಜಿಹಾದ್‌ ಪ್ರಕರಣ ಹಿಮ್ಮೆಟ್ಟಿಸಿದರೆ ಕರಾವಳಿ ಶಾಂತ ಆಗಲಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದೇಶಗಳಿಂದ ಹಣಕಾಸು ನೆರವು ಸಿಗುತ್ತಿರುವ ಕಾರಣದಿಂದ ಕರಾವಳಿಯಲ್ಲಿ ಧರ್ಮಾಧಾರಿತ ಹತ್ಯೆ ನಡೆಯುತ್ತಿದೆ ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ತಿಳಿಸಿದೆ. ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದು ಕೂಡಾ ಇದೇ ಕಾರಣಕ್ಕಾಗಿ ಎಂದು ಬಿಜೆಪಿ ತಿಳಿಸಿದೆ.

- Advertisement - 

ಕಾಂಗ್ರೆಸ್‌ ಪಕ್ಷವೇ ರಚಿಸಿದ ಸತ್ಯಶೋಧನಾ ಸಮಿತಿ ವರದಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡ ಬಹಿರಂಗವಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಮಾತ್ರ ಹಿಂದೂ ಸಂಘಟಕರ ಮನೆಗಳಿಗೆ ಪೊಲೀಸರನ್ನು ನುಗ್ಗಿಸಿ, ಭಾಷಣಗಳಿಗೆ ಎಫ್‌ಐಆರ್‌ ಜಡಿಯುತ್ತಾ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

- Advertisement - 

ಕೋಮು ನಿಗ್ರಹ ದಳದ ಬದಲು ಧಾರ್ಮಿಕ ಹತ್ಯೆಗೆ ಕಾರಣವಾಗುತ್ತಿರುವ ವಿದೇಶಿ ಶಕ್ತಿಗಳನ್ನು ಸರ್ಕಾರ ಬಗ್ಗುಬಡಿಯಲಿ, ಗೋಕಳ್ಳತನ, ಅಕ್ರಮ ಮರಳುಗಾರಿಕೆ, ಲವ್‌ ಜಿಹಾದ್‌ ಪ್ರಕರಣಗಳನ್ನು ಹಿಮ್ಮೆಟ್ಟಿಸಿದರೆ ಕರಾವಳಿ ಶಾಂತವಾಗುತ್ತದೆ ಎಂದು ಬಿಜೆಪಿ ಹೇಳಿದೆ.

 

- Advertisement - 

Share This Article
error: Content is protected !!
";