“ಬ್ರ್ಯಾಂಡ್‌ಬೆಂಗಳೂರು” ಹೆಸರಲ್ಲಿ  ಕಾಂಗ್ರೆಸ್ ಸರ್ಕಾರ ಲೂಟಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ರ್ಯಾಂಡ್‌ಬೆಂಗಳೂರು” ಹೆಸರಲ್ಲಿ  ರಾಜ್ಯ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಜೆಡಿಎಸ್ ಟ್ವೀಟ್ ಆರೋಪಿಸಿದೆ.

ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಕೂಡ ಹಾಕಿಸದ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬಿಟ್ಟಿ ಪ್ರಚಾರ ಪಡೆಯುತ್ತಿರುವುದು ಬಿಟ್ಟರೆ, ಬೆಂಗಳೂರಿಗರಿಗೆ ಯಮಗುಂಡಿಗಳಿಂದ ಇನ್ನೂ ಮುಕ್ತಿ ಕೊಡಿಸಿಲ್ಲ.  

ರಾಜಧಾನಿಯ ಯಾವುದೇ ರಸ್ತೆಗಳಿಗೂ ಹೋದರೂ ನೂರಾರು ಗುಂಡಿಗಳು ಅನಾಹುತಕ್ಕೆ ಆಹ್ವಾನಿಸುತ್ತಿದೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಾದ ನರಕವನ್ನು ಸಿದ್ದರಾಮಯ್ಯ ಸರ್ಕಾರ ತಂದಿಟ್ಟಿದೆ. 

ಬ್ರ್ಯಾಂಡ್‌ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ ಕಲೆಕ್ಷನ್‌ಗಿರಾಕಿ ಪರ್ಸಂಟೇಜ್‌ಲೆಕ್ಕದಲ್ಲಿ ಲೂಟಿಹೊಡೆಯುತ್ತಿದ್ದು659 ಕೋಟಿ ಹಣದಲ್ಲಿ ಜೇಬಿಗಿಳಿಸಿಕೊಂಡಿದ್ದು ಎಷ್ಟು ? ಎಂದು ಜೆಡಿಎಸ್ ಪ್ರಶ್ನಿಸಿದೆ.

ತೇಪೆ ಹಚ್ಚಲು ಕಾಂಗ್ರೆಸ್‌ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ..? ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡುವುದು ಇರಲಿ, ತೇಪೆ ಹಾಕಲು ಬೊಕ್ಕಸದಲ್ಲಿ ಹಣವಿಲ್ಲವೇ ? “ಕಮಿಷನ್‌ಕಾಂಗ್ರೆಸ್‌ಸರ್ಕಾರ”ಕ್ಕೆ  “ಬ್ರ್ಯಾಂಡ್‌ಬೆಂಗಳೂರು” ಎಂಬುದು 2028ರ ಚುನಾವಣೆಗೆ ಹಣ ದೋಚುವ ಯೋಜನೆಯಾಗಿಬಿಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.

Share This Article
error: Content is protected !!
";