ಧರ್ಮಸ್ಥಳ ಷಡ್ಯಂತ್ರದ ಹಿಂದೆ ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರದ ಕೈವಾಡ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರದ ಹಿಂದೆ ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರದ ಕೈವಾಡವಿದೆ ಎಂಬ ಅನುಮಾನಗಳು ಬಲವಾಗುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಉನ್ನತ ಮಟ್ಟದ ತನಿಖೆ ಕೋರಿ ಬುರುಡೆ ಗ್ಯಾಂಗ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮೇ, 2025ರಲ್ಲೇ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.  

- Advertisement - 

ಧರ್ಮಸ್ಥಳ ಪ್ರಕರಣ ವಿಚಾರವಾಗಿ SIT ರಚನೆ ಮಾಡುವುದಕ್ಕೆ ಮುಂಚೆ ಪಿಐಎಲ್‌ ಅರ್ಜಿ ವಜಾ ಆಗಿದೆ ಎಂಬುದನ್ನು ಯಾಕೆ ಪರಿಶೀಲಿಸಲಿಲ್ಲ ?

ಸುಪ್ರೀಂ ಕೋರ್ಟ್‌ ಆದೇಶವನ್ನು ಮುಚ್ಚಿಟ್ಟು  ಧರ್ಮಸ್ಥಳದ ವಿರುದ್ಧ ಸಂಚು ಹೂಡಿ ಎಸ್‌ಐಟಿ ರಚನೆ ಮಾಡುವಂತೆ ಸಿದ್ದರಾಮಯ್ಯನ ಆಪ್ತ ಬಳಗವೇ ನೋಡಿಕೊಂಡಿದೆ ಎಂಬ ಆರೋಪಗಳಿಗೆ ಇದು ಪುಷ್ಠಿನೀಡಿದೆ. 

- Advertisement - 

ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ ಅವರೇ, ಈ ಬಗ್ಗೆ ಕನಿಷ್ಠ ಕಾನೂನಿನ ಅರಿವು ಇರಲಿಲ್ಲವೇ ? ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.  

 

 

Share This Article
error: Content is protected !!
";