ಕೈಗಾರಿಕಾ ಉತ್ಪಾದನೆಯ ಭವಿಷ್ಯದ ಕುರಿತು ಕೈಗಾರಿಕೋದ್ಯಮಿಗಳ ಸಮಾವೇಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕವನ್ನು
ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ಚಿಂತನ ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ  ಒಂದು ದಿನದ ʼಉತ್ಪಾದನಾ ಮಂಥನʼ ಸಮಾವೇಶಕ್ಕೆ ಕೈಗಾರಿಕೆ ಸಚಿವ ಎಂ.ಬಿ ಪಾಲೀಟ್ ಚಾಲನೆ ನೀಡಿ ಮಾತನಾಡಿದರು.

- Advertisement - 

ಉದ್ಯಮದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ  ಉತ್ಪಾದನಾಮಂಥನ ಒಂದು ವಿಶಿಷ್ಟ ವೇದಿಕೆಯೂ ಹೌದು. ತಲಾ GSDP ಹಾಗೂ ಆದಾಯದಲ್ಲಿ ದೇಶದಲ್ಲಿ 2ನೇ, SGST ಸಂಗ್ರಹದಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ ಇಂದು ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, EV, R&D ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದು ಸಚಿವರು ತಿಳಿಸಿದರು.

- Advertisement - 

ಈ ಬೆಳವಣಿಗೆ ನಿನ್ನೆಯಿಂದ ಶುರುವಾಗಿಲ್ಲ. ಅದು ನಿಮ್ಮ ಹೂಡಿಕೆ, ನಂಬಿಕೆ ಮತ್ತು ಪಾಲುದಾರಿಕೆಯಿಂದ ಸಾಧ್ಯವಾಗಿದೆ. ಇಂದು ಕೇಳಲು ಅಲ್ಲ, ಕಲಿಯಲು ಸೇರಿದ್ದೇವೆ ನಿಮ್ಮ ಅನುಭವದಿಂದ ನಾವು ಏನು ಉತ್ತಮ ಮಾಡಬಹುದು ಎಂಬುದನ್ನು ಅರಿಯಲು ಬಯಸುತ್ತಿದ್ದೇವೆ. ಉದ್ಯಮದ ಸ್ಥಾಪನೆಯಿಂದ ಆರಂಭಿಸಿ, ಸವಾಲು-ಸಾಧನೆಗಳ ತನಕ ನಿಮ್ಮ ನೈಜ ಅನುಭವ, ದೃಷ್ಟಿಕೋನ ಹಾಗೂ ಒಳನೋಟ ಸರ್ಕಾರಕ್ಕೆ ದಾರಿದೀಪವಾಗಲಿದೆ ಎಂದು ಸಚಿವರು ತಿಳಿಸಿದರು.

 ಈ ಪರಿಕಲ್ಪನೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲನೆಯ ಪ್ರಯತ್ನವಾಗಿದ್ದು, ಉದ್ಯಮಿಗಳಿಂದ ಹಾಗೂ ತಜ್ಞರಿಂದ ಉತ್ಸಾಹಪೂರಿತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ. ಇದರಿಂದ ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ರೂಪಿಸಬೇಕೆಂಬ ನಮ್ಮ ಮಹತ್ವಾಕಾಂಕ್ಷೆಗೆ ಹೊಸ ದಿಕ್ಕು ದೊರೆಯಲಿದೆ ಎಂದು ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

- Advertisement - 

 

Share This Article
error: Content is protected !!
";