ಸ್ಥಿರ ಅಭಿವೃದ್ಧಿಗಾಗಿ ನವೀನ ಸಿಎಸ್ ಆರ್ ನಿರ್ವಹಣಾ ಕ್ರಮಗಳು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಆವರಣದಲ್ಲಿ ಪಿಎಂ ಉಷಾ
ಯೋಜನೆಯ ಅಡಿಯಲ್ಲಿ ಸ್ಥಿರ ಅಭಿವೃದ್ಧಿಗಾಗಿ ನವೀನ ಸಿಎಸ್ ಆರ್ ನಿರ್ವಹಣಾ ಕ್ರಮಗಳುಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿತ್ತು.

ದಾವಣಗೆರೆ ವಿವಿಯ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಪ್ರೊ. ಶ್ರೀನಿವಾಸ್ ಕೆ.ಟಿ ಮಾತನಾಡಿ, ನವೀನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿರ್ವಹಣಾ ಕ್ರಮಗಳು ಮತ್ತು ಸ್ಥಿರ ಅಭಿವೃದ್ಧಿಯಲ್ಲಿ ಅವುಗಳ ಮಹತ್ವದ ಬಗ್ಗೆ ವಿವರವಾದ ಉಪನ್ಯಾಸ ನೀಡಿದರು.
ಸಂಸ್ಥೆಗಳು ಸಿಎಸ್ ಆರ್ ನಿಧಿಯನ್ನು ತಮ್ಮ ಮೂಲ ವ್ಯವಹಾರ ತಂತ್ರಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

- Advertisement - 

ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಹಾಗೂ ಅಧ್ಯಯನ ಮಂಡಳಿಯ ಅಧ್ಯಕ್ಷ ಮತ್ತು ಸಂಪರ್ಕಾಧಿಕಾರಿ ಪ್ರೊ. ಬಿ. ನಾಗರಾಜು ಮಾತನಾಡಿ ಸಮಾಜದ ಹೊಣೆಗಾರಿಕೆ, ಕುಟುಂಬ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧ, ಶಿಕ್ಷಣ, ಆರೋಗ್ಯ ಹಾಗೂ ಪರಿಸರದ ಪ್ರಸ್ತುತ ಸ್ಥಿತಿ ಮತ್ತು ಭಾರತದ ಅಭಿವೃದ್ಧಿ ದಿಕ್ಕಿನ ಬಗ್ಗೆ ಅವರು ಸಮಗ್ರವಾಗಿ ವಿಶ್ಲೇಷಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಕೋಟ್ರಪ್ಪ ಸಿ.ಕೆ. ಅವರು ಇಂತಹ ಶೈಕ್ಷಣಿಕ ವೇದಿಕೆಗಳು ನವೀನ ಸಿಎಸ್ ಆರ್ ಅಭ್ಯಾಸಗಳನ್ನು ಉತ್ತೇಜಿಸಲು ಮಹತ್ವದ್ದಾಗಿವೆ ಎಂದು ತಿಳಿಸಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಿದರು. ವಿವಿಧ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳು ಡಾ ಸತ್ಯನಾರಾಯಣ, ಡಾ.ವೆಂಕಟೇಶಬಾಬು, ಪೊ. ಸಿಕೆ ಮಹೇಸ್ವರಪ್ಪ, ಪ್ರೊ. ಕೆ ರಾಮರಾವ್‌, ಪ್ರೊ. ರಾಜಶೇಖರಪ್ಪ ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸಿ ಸಿಎಸ್ ಆರ್ ಮತ್ತು ಸ್ಥಿರ ಅಭಿವೃದ್ಧಿಯ ವಿವಿಧ ಆಯಾಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರತಿನಿಧಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದ ಪೋಸ್ಟರ್ ಪ್ರದರ್ಶನಗಳನ್ನು ನೀಡಿ ವಿಷಯಗಳನ್ನು ಮಂಡನೆ ಮಾಡಿದರು.

- Advertisement - 

ಕಾಲೇಜಿನ ಬೋಧಕ ಮತ್ತು ಬೋದಕೇತರ ವರ್ಗದವರು ಹಾಗೂ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದರು.
ಈ ಸಮ್ಮೇಳನವು ಜ್ಞಾನ ಹಂಚಿಕೆ
, ಸಂವಾದ ಮತ್ತು ಸ್ಥಿರ ಸಿಎಸ್ ಆರ್ ಕ್ರಮಗಳ ಪ್ರಚಾರಕ್ಕೆ ಪರಿಣಾಮಕಾರಿ ವೇದಿಕೆಯಾಗಿತ್ತು.

 

Share This Article
error: Content is protected !!
";