ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಸಿ.ಸೋಮಶೇಖರ್ ಹಾಗೂ ಖ್ಯಾತ ಜಾನಪದ ಗಾರುಡಿಗ ಗುರುರಾಜ್ ಹೊಸಕೋಟೆ ರವರೊಂದಿಗೆ ರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ ನೀಡುವ ರಾಷ್ಟ್ರೀಯ ಬುದ್ಧ ಪ್ರಶಸ್ತಿಯನ್ನು ಮುಂಗಾರು ಮಳೆಯಲ್ಲಿ ಬುದ್ಧ ಪೂರ್ಣಿಮೆಯ ದಿನ ಸಾಮಾಜಿಕ ಕಳಕಳಿವುಳ್ಳ ವ್ಯಕ್ತಿಯಾದ ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಜೆ.ರಾಜು ಬೇತೂರುಪಾಳ್ಯ ಇವರ ಸಮಾಜ ಸೇವೆ ಗುರುತಿಸಿ ಬುದ್ಧ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಿಬಿಎಂಪಿ ಡೆಪ್ಯೂಟಿ ಕಮಿಷನ್ ಜೆ.ರಾಜು ಬೇತೂರು ಪಾಳ್ಯ ಸೇರಿದಂತೆ ಹಿರಿಯ ಸಾಂಸ್ಕೃತಿಕ ಚಿಂತಕ, ಡಾ. ಸಿ.ಸೋಮಶೇಖರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ, ಹಿರಿಯ ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಸೇರಿ ಏಳು ಮಂದಿ ಗಣ್ಯರಿಗೆ ಬುದ್ಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಮಾಗಡಿ ಮುಖ್ಯರಸ್ತೆ, ಎಲೆಕೊಡಿಗೆಹಳ್ಳಿಯ, ನ್ಯೂ ಹಾರ್ಡ್ವೀಕ್ ಇಂಡಿಯನ್ ಸ್ಕೂಲ್ ಆವರಣದಲ್ಲಿ ನಿ.ಪ್ರ.ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಬೇಲಿಮಠ ಇವರ ಸಮ್ಮುಖದಲ್ಲಿ ಸಂಸ್ಥಾಪಕ ಕಾರ್ಯದರ್ಶಿ ಕೆ ಎಚ್. ಕುಮಾರ್ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.