ವಕ್ಫ್‌ಆಸ್ತಿ ಕಬಳಿಸಲು ಸಂಚು ರೂಪಿಸಿರುವ ಜಮೀರ್ ರಾಜೀನಾಮೆ ಪಡೆಯಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್‌ಆಸ್ತಿ ಕಬಳಿಸಲು “ಕೈ” ಜೋಡಿಸಿದ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಚಿವ ಜಮೀರ್‌ಆಪ್ತ ಹಾಗೂ ವಕ್ಫ್ ಬೋರ್ಡ ಮಾಜಿ ಅಧ್ಯಕ್ಷ ಅನ್ವರ್ ಪಾಷಾ
ಚಿತ್ರದುರ್ಗದಲ್ಲಿ 6 ಎಕರೆ ಜಾಗವನ್ನು ಕಬಳಿಸಿದ್ದಾರೆ. ಈ ವಿಚಾರವಾಗಿ ನ್ಯಾಯಕ್ಕಾಗಿ ಆಗ್ರಹಿಸಿ, ಇಮ್ತಿಯಾಜ್ ಎಂಬ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

- Advertisement - 

ಆದರೆ ಭೂಗಳ್ಳ ಅನ್ವರ್ ಪಾಷಾ ಬೆನ್ನಿಗೆ ನಿಂತ ಜಮೀರ್ ಅಹಮದ್‌ನ್ಯಾಯ ಕೇಳಿದ ಇಮ್ತಿಯಾಜ್ ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಜೆಡಿಎಸ್ ಕಿಡಿ ಕಾರಿದೆ.

- Advertisement - 

ವಕ್ಫ್‌ಆಸ್ತಿ ಒತ್ತುವರಿ ಮಾಡಿರುವ ಅನ್ವರ್‌ಗೂ, ಜಮೀರ್‌ಸಾಬ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ಷಮಾಪಣೆ ಕೇಳಿ ವೀಡಿಯೋ ಮಾಡಿ‌ನನಗೆ ಕಳಿಸು ಎಂದು ಜಮೀರ್, ಆ ಯುವಕನಿಗೆ ಬೆದರಿಸಿರುವ ಆಡಿಯೋ ವೈರಲ್ ಆಗಿದೆ. ಸರ್ಕಾರದ ಆಸ್ತಿಯನ್ನು ಲೂಟಿ ಹೊಡೆಯಲು ಸಚಿವ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಮೀರ್‌ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿತ್ತುಹಾಕಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

- Advertisement - 

Share This Article
error: Content is protected !!
";