ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಭಾಷಾಭಿಮಾನವನ್ನು ಅವಮಾನಿಸಿದ ಗಾಯಕ ಸೋನು ನಿಗಮ್ನಿಮಗೆ ಧಿಕ್ಕಾರವಿರಲಿ ಎಂದು ಜೆಡಿಎಸ್ ಎಚ್ಚರಿಸಿದೆ.
ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ, ಕನ್ನಡದ ಮೇಲಿನ ನಮ್ಮ ಅಭಿಮಾನವನ್ನು “ಪಹಲ್ಗಾಮ್ ಉಗ್ರರ” ದಾಳಿಗೆ ಹೋಲಿಕೆ ಮಾಡಿದ್ದು ಖಂಡನೀಯ. ಇದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಕನ್ನಡಾಭಿಮಾನವನ್ನು ಪಹಲ್ಗಾಮ್ಘಟನೆಗೆ ಕಲ್ಪಿಸಿದ ನಿಮ್ಮದು ಉಗ್ರಗಾಮಿ ಮನಸ್ಥಿತಿ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಾಡನ್ನು ಹಾಡುವಂತೆ ಕೇಳಿದರೇ ಅದು ತಪ್ಪೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸೋನು ನಿಗಮ್ನೀವು ಕನ್ನಡ ಭಾಷೆಯಲ್ಲಿ ಹಾಡು ಹಾಡಿದ್ದಕ್ಕೆ ಕರ್ನಾಟಕದಲ್ಲಿ ಮನೆ ಮಾತಾಗಿದ್ದೀರಿ, ಪ್ರಖ್ಯಾತಿಯನ್ನು ಪಡೆದಿದ್ದು ಎಂಬುದನ್ನು ಮರೆತುಬಿಟ್ಟಿರಾ ? ಕೋಟ್ಯಂತರ ಕನ್ನಡಿಗರು, ಅಭಿಮಾನಿಗಳು ನಿಮ್ಮನ್ನು ಆರಾಧಿಸುತ್ತಾ ಪ್ರೀತಿ ಕೊಟ್ಟಿದ್ದಾರೆ. ಆದರೆ ನೀವು ಕನ್ನಡದ ಮನಸ್ಸುಗಳನ್ನು, ಅಭಿಮಾನಿಗಳನ್ನು ಅವಮಾನಿಸಿ, ನೋಯಿಸಿದ್ದೀರಿ, ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಿದ್ದೀರಿ.
ಕನ್ನಡವನ್ನು ಪಹಲ್ಗಾಮ್ಘಟನೆಗೆ ಸಂಬಂಧ ಕಲ್ಪಿಸಿ, ಕನ್ನಡಿಗರನ್ನ ಕೆಣಕಿರುವ ಸೋನು ನಿಗಮ್ಕನ್ನಡಿಗರ ಕ್ಷಮೆ ಕೇಳಲೇಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.