ವಾರ್ಡ್ ಅಧ್ಯಕ್ಷರುಗಳ  ಸಭೆ ನಡೆಸಿದ ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ  ಎಚ್ಎಂ ರಮೇಶ್ ಗೌಡ ರವರ ಅಧ್ಯಕ್ಷತೆಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮುಖಂಡರು, ಪದಾಧಿಕಾರಿಗಳು ಹಾಗೂ ವಾರ್ಡ್ ಅಧ್ಯಕ್ಷರುಗಳ  ಸಭೆಯನ್ನು ಶೇಷಾದ್ರಿಪುರದಲ್ಲಿರುವ ಹೋಟೆಲ್ ಹಸಿರು ತೋಟದಲ್ಲಿ  (ಗ್ರೀನ್ ಪಾತ್) ನಡೆಸಲಾಯಿತು.  

ಈ ಸಭೆಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ವಕೀಲ ಆರ್.ಎಲ್.ಎನ್ ಮೂರ್ತಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ವಿ. ನಾಗೇಶ್ವರ ರಾವ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಬೆಂಗಳೂರು ನಗರ ಕಾರ್ಯಾಧ್ಯಕ್ಷ ಕೆ.ವಿ ನಾರಾಯಣಸ್ವಾಮಿ, ಬೆಂಗಳೂರು ವಿಭಾಗಗಳ ಅಧ್ಯಕ್ಷ ಸ್ಯಾಮುಯೆಲ್, (ಯುವ ಘಟಕ),

- Advertisement - 

ಎಂ ಗೋಪಾಲ್ (ಕಾರ್ಮಿಕ ವಿಭಾಗ), ಫಣಿರಾಜ್ ಹಿರಿಯಣ್ಣಗೌಡ (ಮಾಹಿತಿ ತಂತ್ರಜ್ಞಾನ ವಿಭಾಗ), ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡರಾದ ವೈ.ತಿಮ್ಮಯ್ಯ, ಎನ್ ಎ ಷಣ್ಮುಗಂ, ಬಿ ವಿ ವೆಂಕಟೇಶ್, ಗುರಪ್ಪ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

- Advertisement - 
Share This Article
error: Content is protected !!
";