ಕರುನಾಡಿನ ಅಸ್ಮಿತೆಯೇ ಕನ್ನಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿನ ಅಸ್ಮಿತೆಯೇ ಕನ್ನಡ! ಕನ್ನಡಿಗರಿಗೆ ಅದು ಕೇವಲ ಸಂವಹನದ ಮಾಧ್ಯಮವಲ್ಲ ಉಸಿರು ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

- Advertisement - 

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ಇಲ್ಲಿ ವ್ಯವಹಾರ ನಡೆಸಲು, ಉದ್ಯೋಗ ಪಡೆಯಲು ಕನ್ನಡ ತಿಳಿದಿರಬೇಕು, ಕಲಿಯಬೇಕು ಎನ್ನುವ ಕನ್ನಡಿಗರ ಬೇಡಿಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ನ್ಯಾಯ ಸಮ್ಮತವಾದದ್ದು. ಹಾಗೆಂದು ಕನ್ನಡ ಕಲಿಯಲೇ ಬೇಕೆಂಬ ಕಾನೂನಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

- Advertisement - 

ಕನ್ನಡಿಗರು ಎಲ್ಲರನ್ನೂ ತಮ್ಮವರೆಂದೇ ಕಾಣುವವರು. ಆದರೆ ಸ್ಥಳೀಯರೊಂದಿಗೆ ಭಾವನಾತ್ಮಕವಾಗಿ, ವ್ಯಾವಹಾರಿಕವಾಗಿ ಬೆರೆಯಲು ಅದು ಅಗತ್ಯ ಎಂಬ ಸಾಮಾನ್ಯ ಪರಿಜ್ಞಾನ ಅವಶ್ಯಕ.

ಕರ್ನಾಟಕ ತನ್ನ ಉದ್ಯಮಸ್ನೇಹಿ ವಾತಾವರಣ, ಸರ್ಕಾರದ ಪೂರಕ ಬೆಂಬಲ, ಮಾನವ ಸಂಪನ್ಮೂಲ, ಶಾಂತ – ಸೌಹಾರ್ದ ವಾತಾವರಣದಿಂದಾಗಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನದಲ್ಲಿರುವ ರಾಜ್ಯಗಳಲ್ಲೊಂದು. ಉದ್ಯೋಗಾವಕಾಶಗಳೂ ಹೇರಳವಾಗಿವೆ. ಪ್ರಚಾರಕ್ಕಾಗಿ ಯಾರೂ ತಪ್ಪು ಸಂದೇಶ ನೀಡಬಾರದು! ಎಂದು ಕಾಂಗ್ರೆಸ್ ಮನವಿ ಮಾಡಿದೆ.

- Advertisement - 

 

Share This Article
error: Content is protected !!
";