ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದ ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಲಿತರ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡು ಬಲಿತಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಕುಟುಂಬದ ಲೂಟಿ ಮಾರ್ಗಗಳು ನೂರಾರು. ಜನರ ತೆರಿಗೆ ದುಡ್ಡಿನಲ್ಲಿ ಕರ್ನಾಟಕ ಕಾಂಗ್ರೆಸ್ ಜಾತ್ರೆ ಜೋರಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಬೀದರ್‌ನ ಸಿದ್ದಾರ್ಥ ಜ್ಯೂನಿಯರ್ ಕಾಲೇಜಿನ (
KPES) ಕಾಂಪೌಂಡ್ ನಿರ್ಮಾಣಕ್ಕೆ 2025ರ ಮಾರ್ಚ್ 7ರಂದು ₹51.15 ಲಕ್ಷ ಹಣ ಮಂಜೂರು ಮಾಡಲಾಗಿದೆ. 

ಹೈಕಮಾಂಡ್‌ಗುಲಾಮಗಿರಿಯನ್ನು ಚಾಚೂ ತಪ್ಪದೇ ಪಾಲಿಸುವ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡೆತನದ ಸಂಸ್ಥೆಗೆ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದ್ದಾರೆ.

ಖರ್ಗೆಯವರ ಕರ್ನಾಟಕ ಪೀಪಲ್ಸ್ ಎಜುಕೇಷನ್‌ಸೊಸೈಟಿ ವಿರುದ್ಧ ಹಣ ದುರ್ಬಳಕೆ ಸಂಬಂಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ದೂರು ಇತ್ಯರ್ಥವಾಗದೇ ಇದ್ದರೂ ಸಹ ಕಾಂಗ್ರೆಸ್‌ಸರ್ಕಾರ ಲಕ್ಷ ಲಕ್ಷ ಹಣವನ್ನು ಎತ್ತಿಕೊಟ್ಟಿರುವುದು ಎಷ್ಟು ಸರಿ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿಗೆ ದುಡ್ಡಿಲ್ಲ, ಶಿಕ್ಷಕರ ನೇಮಕ ಮಾಡಲು ಹಣವಿಲ್ಲ. ಆದರೆ,  ಖರ್ಗೆ ಕುಟುಂಬದ ಖಾಸಗಿ ಶಿಕ್ಷಣ ಸಂಸ್ಥೆಗೆ ಹಣ ಕೊಡಲು ಅಡ್ಡಿಯಿಲ್ಲವೇ ಸಿದ್ದರಾಮಯ್ಯ ? ಎಂದು ತೀಕ್ಷ್ಣವಾಗಿ ಜೆಡಿಎಸ್ ಪ್ರಶ್ನಿಸಿದೆ.

Share This Article
error: Content is protected !!
";