ಎತ್ತಿನಹೊಳೆ ಯೋಜನೆಯಲ್ಲಿ ಹಲವು ಗ್ರಾಮಗಳ ನೀರು ಪೂರೈಕೆ-ಕೆ.ಎಸ್.ರವಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಬೆ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಮಂಗಳವಾರ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ  ಪ್ರಾಧಿಕಾರದ ಸದಸ್ಯರು
, ಹಣಬೆ ವಿಎಸ್ಎಸ್ಎನ್ ಅಧ್ಯಕ್ಷ ಕೆ ಎಸ್ ರವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬಿ ಮುನಿರಾಜು, ಹೆಚ್ ಸಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ  ಅಂತಿಮಗೊಳಿಸಿರುವಂತೆ ತಾಲ್ಲೂಕಿನ 05 ಕೆರೆಗಳನ್ನು ಗುರುತಿಸಲಾಗಿದೆ.

- Advertisement - 

 ಈ ಆಯ್ಕೆ 5 ಕೆರೆಗಳಿಂದ ಕುಡಿಯುವ ನೀರನ್ನು ಕಲ್ಪಿಸುವ ವರದಿ ತಯಾರಿಕೆ ಹಂತದಲ್ಲಿದ್ದು ಸದರಿ 05 ಕರೆಗಳಲ್ಲಿ ಹಣಬೆ ಕೆರೆಯೂ ಸೇರಿದೆ, ಹಣಬೆ ಕೆರೆಗೆ ನೀರು ತುಂಬಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.

 ಈ ವೇಳೆ ಹಣಬೆ ಗ್ರಾಮದ ಮುಖಂಡರಾದ ಮಲ್ಲ ರಾಜು, ಮುನಿರಾಜು, ರಾಮಕೃಷ್ಣಪ್ಪ, ಜಗದೀಶ್ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

- Advertisement - 

Share This Article
error: Content is protected !!
";