ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾಜಿ ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸತೀಶ್ ಗೌಡ ಅಭಿಮಾನಿಗಳ ಬಳಗದಿಂದ ಮಂಗಳವಾರ ಧರ್ಮಪುರ ಸಮುದಾಯ ಅರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ದುಷ್ಯಂತ್, ರಂಗಸ್ವಾಮಿ, ನರಸಿಂಹಪ್ಪ, ಗೊಲ್ಲಹಳ್ಳಿ ಕಾಂತರಾಜ್, ಧರ್ಮಪುರ ಹರೀಶ್, ಸೂಗೂರು ಪಾಂಡುರಂಗಪ್ಪ ಇನ್ನು ಮುಂತಾದವರು ಇದ್ದರು.

