ಹೊರ ರಾಜ್ಯ ಛತ್ತಿಸಗಢದ ಬಿಲಾಯ್ ಕನ್ನಡ ಸಂಘದ ವತಿಯಿಂದ ಕುಮಾರಸ್ವಾಮಿಗೆ ಸನ್ಮಾನ

News Desk

ಹೊರ ರಾಜ್ಯ ಛತ್ತಿಸಗಢದ ಬಿಲಾಯ್ ಕನ್ನಡ ಸಂಘದ ವತಿಯಿಂದ ಕುಮಾರಸ್ವಾಮಿಗೆ ಸನ್ಮಾನ
ಚಂದ್ರವಳ್ಳಿ ನ್ಯೂಸ್, ಛತ್ತಿಸಗಢ:
ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಛತ್ತಿಸಗಢದ ಬಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ನೀಡಲು ಹೋಗಿದ್ದ ಸಂದರ್ಭದಲ್ಲಿ ‘ಬಿಲಾಯ್ ಕನ್ನಡ ಸಂಘ’ದ ಸದಸ್ಯರು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿದರು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.

- Advertisement - 

‘ಬಿಲಾಯ್ ಕನ್ನಡ ಸಂಘ’ದ ಸದಸ್ಯರುಗಳ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ ಎಂದು ಕುಮಾರಸ್ವಾಮಿ ಅವರು ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

- Advertisement - 

ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಅವರುಗಳು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ.

- Advertisement - 
Share This Article
error: Content is protected !!
";