ಬರಗೂರಿನಲ್ಲಿ ಚಿರತೆ ಪ್ರತ್ಯಕ್ಷ ಆತಂಕದಲ್ಲಿ ಜನರು

News Desk

ಚಂದ್ರವಳ್ಳಿ ನ್ಯೂಸ್, ಶಿರಾ:
ಶಿರಾ ತಾಲೂಕಿನ ಬರಗೂರು ಫ್ಲಾರೆನ್ಸ್ ಶಾಲೆ ಹತ್ತಿರ ಚಿರತೆಯೊಂದು ದಿಢೀರ್ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರು, ರೈತರು ಆತಂಕದಲ್ಲಿದ್ದಾರೆ. ಬರಗೂರಿನಲ್ಲಿ ಚಿರತೆ ಕಂಡ ಜನರು ಭಯಭೀತರಾಗಿರುವ ಘಟನೆ ಜರುಗಿದೆ.

- Advertisement - 

ಏಕಾಏಕಿ ಚಿರತೆ ಕಾಣಿಸಿಕೊಂಡಿದ್ದು ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಂತ ರೈತರು, ಕಾರ್ಮಿಕರು, ಮಕ್ಕಳು ತಂಬಾ ಆತಂಕದಲ್ಲಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಭಯ ದೂರ ಮಾಡುವುದರ ಜೊತೆಯಲ್ಲಿ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ.

- Advertisement - 

ಚಿರತೆಗಳು ಕುರಿ, ಮೇಕೆ, ಕೋಳಿ ಮತ್ತು ನಾಯಿಗಳ ಮೇಲೆ ದಾಳಿ ಮಾಡಲು ಕಲ್ಲುಬಂಡೆಯ ಮೇಲೆ ಕುಳಿತು ಹೊಂಚುಹಾಕುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಅರಣ್ಯಾಧಿಕಾರಿಗಳು ತಕ್ಷ ಣ ಚಿರತೆಗಳನ್ನು ಹಿಡಿದು ಸಾರ್ವಜನಿಕರಿಗೆ ರಕ್ಷ ಣೆ ನೀಡಬೇಕೆಂದು ಬರಗೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

- Advertisement - 

Share This Article
error: Content is protected !!
";