ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಯಾಂಕಿ ಕೆರೆಯಲ್ಲಿ ಆರತಿ ಮಾಡಿದರೇ ಪಾಪ ಕಳೆಯುವುದಿಲ್ಲ. ಪುಣ್ಯವೂ ಬರುವುದಿಲ್ಲ! ಡಿಕೆ ಶಿವಕುಮಾರ್…
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆ ಮೂಲಕ ಹರಿಸಿರುವ ತ್ಯಾಜ್ಯ ನೀರಿನಲ್ಲಿ ಜಲಸಂಪನ್ಮೂಲ ಸಚಿವರು ಸ್ನಾನ ಮಾಡಬೇಕಿತ್ತು ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ಆಗ ಆ ಭಾಗದ ಜನರಿಗೆ ಸಂಸ್ಕರಿಸಿರುವ ನೀರಿನ ಶುದ್ಧತೆ ಮೇಲೂ ಹಾಗೂ ಡಿಕೆಶಿ ಮೇಲೂ, ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಬರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ ಮಿಸ್ಟರ್ಡಿಕೆಶಿ, ಇವತ್ತು ವಿಶ್ವ ಜಲ ದಿನ ಎಂದು ಜೆಡಿಎಸ್ ತಾಕೀತು ಮಾಡಿದೆ.