ಚಿತ್ರದುರ್ಗ ನಿವೃತ್ತ ಕನಕ ನೌಕರರ ಸಂಘದ ಉಪಾಧ್ಯಕ್ಷರಾಗಿ ಲೋಕೇಶ್ವರಪ್ಪ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಿವೃತ್ತ ಕನಕ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾಗಿ ಡಿ.ಆರ್.ಲೋಕೇಶ್ವರಪ್ಪ ಇವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಡಿ.ಆರ್ ಲೋಕೇಶ್ವರಪ್ಪ ಇವರು ಚಿತ್ರದುರ್ಗದ ನಿವಾಸಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದರು.

- Advertisement - 

ಚಿತ್ರದುರ್ಗ ನಿವೃತ್ತ ಕನಕ ನೌಕರರ ಸಂಘದ ಗೌರವಾಧ್ಯಕ್ಷ ಕೆ.ರಾಜಣ್ಣ, ಅಧ್ಯಕ್ಷ ರಮೇಶ್ ಮದರಿ, ಕಾರ್ಯಾಧ್ಯಕ್ಷ ಡಿ.ಎನ್.ವೀರಭದ್ರಪ್ಪ, ಉಪಾಧ್ಯಕ್ಷ ವೀರಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಜಿ ಗುರುರಾಜ್, ಖಜಾಂಚಿ ಸೀತಾರಾಮಪ್ಪ ಸೇರಿದಂತೆ ಮತ್ತಿತರರು ಲೋಕೇಶ್ವರಪ್ಪ ಇವರನ್ನು ಅಭಿನಂದಿಸಿದ್ದಾರೆ.

- Advertisement - 

Share This Article
error: Content is protected !!
";