ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಚಂದ್ರವಳ್ಳಿ ಪತ್ರಿಕೆಯ ತಾಲೂಕಿನ ವರದಿಗಾರ ಮಲ್ಲಪ್ಪನಹಳ್ಳಿ ಎಂ ಎಲ್ ಗಿರಿಧರ ಅವಿರೋಧ ಆಯ್ಕೆ

News Desk
- Advertisement -  - Advertisement -  - Advertisement - 

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಚಂದ್ರವಳ್ಳಿ ಪತ್ರಿಕೆಯ ತಾಲೂಕಿನ ವರದಿಗಾರ ಮಲ್ಲಪ್ಪನಹಳ್ಳಿ ಎಂ ಎಲ್ ಗಿರಿಧರ ಅವಿರೋಧ ಆಯ್ಕೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು :

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರ ಆಯ್ಕೆಯ ಸಭೆ ನಡೆಯಿತು.

- Advertisement - 

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಚಂದ್ರವಳ್ಳಿ ಪತ್ರಿಕೆಯ ತಾಲೂಕಿನ ವರದಿಗಾರ ಮಲ್ಲಪ್ಪನ ಹಳ್ಳಿ ಎಂ ಎಲ್ ಗಿರಿಧರ್ ರವರು ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ್ ಐಮಂಗಲ, ಬಸವೇಗೌಡ, ಖಜಾoಚಿಯಾಗಿ ಖಂಡೇನಹಳ್ಳಿ ಬಸವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ್ ಮಸ್ಕಲ್, ಗೌರವಾಧ್ಯಕ್ಷರಾಗಿ ಎಂ. ರವೀಂದ್ರನಾಥ್, ಕಾರ್ಯದರ್ಶಿಯಾಗಿ ಹನುಮಂತರಾಯ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಮೇಶ್ ಬಿದರಕೆರೆ, ಬಬ್ಬೂರು ಪ್ರಕಾಶ್, ಡಾ. ವೀರಣ್ಣ, ಹರ್ತಿಕೋಟೆ ರಾಜಣ್ಣ, ಶಿವಶಂಕರ್ ಮಠದ್, ಶಿವಕುಮಾರ್, ಪ್ರವೀಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement - 

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ್ ತೊಡರನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ್, ಜಿಲ್ಲಾ ಉಪಾಧ್ಯಕ್ಷ ಮಾರುತಿ, ರಾಜ್ಯ ಸಮಿತಿ ಸದಸ್ಯ ಸಿದ್ದರಾಜ್, ರವಿ ಮಲ್ಲಾಪುರ, ಪೊಲೀಸ್ ಬೇಟೆ ಪ್ರಸನ್ನ, ಜಿಓ ಮೂರ್ತಿ, ಪ್ರಜಾವಾಣಿ ಚಂದ್ರಪ್ಪ, ಮಂಜುನಾಥ್ ಮುಂತಾದವರು ಹಾಜರಿದ್ದರು.

Share This Article
error: Content is protected !!
";