ಆಧ್ಯಾತ್ಮಿಕ ಪ್ರಜ್ಞೆ ಮೂಲಕ ಮನುಷ್ಯ ಶ್ರೇಷ್ಠ ಜೀವನ ನಡೆಸಬಹುದು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಚಿತ್ರಾಪುರದ ಶ್ರೀ ವಿಜಯ ಧ್ವಜ ತೀರ್ಥಪೀಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ನಗರದ ಋಗ್ವೇದಿಕುಟೀರಕ್ಕೆ ಆಗಮಿಸಿ ಆಶೀರ್ವದಿಸಿದರು.

  ಮೈಸೂರು ಪ್ರಾಂತ್ಯದಲ್ಲಿ ಯಾತ್ರೆ ಕೈಗೊಂಡಿರುವ ಉಡುಪಿ ಸಮೀಪದ ಚಿತ್ರಪುರದ ಶ್ರೀ ವಿಜಯದ್ವಜ ತೀರ್ಥ ಪೀಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ನಗರದ ಋಗ್ವೇದಿ ಕುಟೀರಕ್ಕೆ ಆಗಮಿಸಿದಾಗ ವೇದ ಗೋಶಾ ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಗಳು ಭಕ್ತಾದಿಗಳಿಗೆ ಆಶೀರ್ವಚನ ಮತ್ತು ಫಲಮಂತ್ರಾಕ್ಷತೆಯನ್ನು ನೀಡಿದರು.

- Advertisement - 

ಜೈ ಹಿಂದ್ ಕಟ್ಟೆಯಲ್ಲಿ ಶ್ರೀರಾಧಾಕೃಷ್ಣರ ಪ್ರತಿಮೆಗೆ ಮಾಲಾರ್ಪಣೆಯನ್ನು ಅರ್ಪಿಸಿ ಆಧ್ಯಾತ್ಮಿಕ ಹಾಗೂ ರಾಷ್ಟ್ರೀಯ ಮೌಲ್ಯಗಳ ಕಾರ್ಯಕ್ರಮಗಳನ್ನು ನಿರಂತರವಾಗಿ ನೆರವೇರಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಉತ್ತಮ ಕಾರ್ಯಗಳನ್ನು ಮತ್ತಷ್ಟು ಮಾಡಲಿ ಎಂದು ಆಶೀರ್ವದಿಸಿದರು.

ಪ್ರತಿಯೊಬ್ಬ ವ್ಯಕ್ತಿಗೂ ಆಧ್ಯಾತ್ಮ ಬಹಳ ಮುಖ್ಯವಾದದ್ದು. ಆಧ್ಯಾತ್ಮಿಕ ಪ್ರಜ್ಞೆಯ ಮೂಲಕ ಮನುಷ್ಯ ಶ್ರೇಷ್ಠ ಜೀವನವನ್ನು ನಡೆಸಬಹುದು. ಸರ್ವರಿಗೂ ಶುಭವಾಗಲಿ.ಭಾರತಕ್ಕೆ ಒಳಿತಾಗಲಿ ಎಂದು ತಿಳಿಸಿದರು.

- Advertisement - 

 ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು,ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮತ್ತು ಕುಟುಂಬದವರು ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಫಲ ಅರ್ಪಿಸಿ ಆಶೀರ್ವಾದ ಪಡೆದರು. ವಿದ್ವಾಂಸರಾದ ವೇದ ಬ್ರಹ್ಮ ಶ್ರೀ ಪ್ರದೀಪ್ ಕುಮಾರ್ ದೀಕ್ಷಿತ್, ಹರಳುಕೋಟೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅರ್ಚಕ ಅನಂತ ಪ್ರಸಾದ್, ಶ್ರೀನಿವಾಸ್, ಮುರುಗೇಶ್, ಕುಸುಮ ಋಗ್ವೇದಿ, ವಾಣಿಶ್ರೀ, ಚಂದ್ರಿಕಾ, ಭಾಗ್ಯಜ್ಯೋತಿ, ಕಿಶೋರ್  ಉಪಸ್ಥಿತರಿದ್ದರು.

Share This Article
error: Content is protected !!
";