ಇಂದು ಸಾಮೂಹಿಕ ಸಂಗೀತ ಧ್ಯಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ
, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರ ಇವುಗಳ ಸಹಯೋಗದೊಂದಿಗೆ ಡಿ.೨೧ ರ ಭಾನುವಾರ ಬೆಳಿಗ್ಗೆ ೯-೩೦ ರಿಂದ ೧-೩೦ ರವರೆಗೆ ಮುರುಘಾಮಠದ ಅನುಭವ ಮಂಟಪದಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ಸಾಮೂಹಿಕ ಸಂಗೀತ ಧ್ಯಾನ ಏರ್ಪಡಿಸಲಾಗಿದೆ.

ಬಸವಕುಮಾರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಾಮೂಹಿಕ ಸಂಗೀತ ಧ್ಯಾನದಲ್ಲಿ ಮುಖ್ಯ ಅತಿಥಿಗಳಾಗಿ ಶಿವಯೋಗಿ ಸಿ.ಕಳಸದ, ಬ್ರಹ್ಮಶ್ರಿ ಪ್ರೇಮನಾಥ, ಡಾ.ಹರಿಕೃಷ್ಣ, ಗೌರೀಶ್ ಇವರುಗಳು ಭಾಗವಹಿಸಲಿದ್ದಾರೆ.

- Advertisement - 

ಸಾಮೂಹಿಕ ಸಂಗೀತ ಧ್ಯಾನದಲ್ಲಿ ಭಾಗವಹಿಸುವವರಿಗೆ ಸಾರಿಗೆ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ : ೮೮೮೪೬೧೬೮೫೫, ೮೬೬೦೬೨೬೪೭೩ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

 

- Advertisement - 

 

 

Share This Article
error: Content is protected !!
";