ಮೇ-7 ರಂದು ನಮ್ಮ ಕನಸು ನಮ್ಮ ತುಮಕೂರು

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ನಾಗರಿಕ ಸಮಾಜಕ್ಕೆ ಬೇಕಾದ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಪರಂಪರೆ ವಿಚಾರಗಳು ಸಾಕಷ್ಟಿವೆ. ತುಮಕೂರು ಜಿಲ್ಲೆ ಅತ್ಯಂತ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಅಭಿವೃದ್ಧಿಯ ವೇಗದ ಮುನ್ನೋಟಕ್ಕೆ ಮಠಗಳ ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಕೈಗಾರಿಕೆಗಳು, ಕೃಷಿಗೆ ಬೇಕಾದ ನೀರಾವರಿ ಸೌಲಭ್ಯ ಇವುಗಳೆಲ್ಲಗಳೆಲ್ಲವು ಜಿಲ್ಲೆಯ ಜನಸಾಮಾನ್ಯರ ಬದುಕಿನ ಪರವಾಗಿ ನಿಂತಿವೆ.

ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಮತ್ತಿತರ ವಿಚಾರಗಳು ಅಗತ್ಯ ಇರುವಷ್ಟು ಲಭ್ಯವಾಗದೆ ಶಕ್ತಿಹೀನವಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯು ಸರ್ವರೀತಿಲ್ಲೂ ಸರ್ವಾಂಗೀಣ ಅಭಿವೃದ್ಧಿಯ ದಾರಿ ಮಾರ್ಗವನ್ನು ಜಿಲ್ಲೆ ಹುಡುಕಾಡುತ್ತಿದೆ. ತುಮಕೂರು ಜಿಲ್ಲೆಯ ನಾಗರಿಕ ಸಮಾಜ ನೆಮ್ಮದಿಯಿಂದ ಬದುಕಲು ನಮ್ಮ ಕನಸು ನಮ್ಮ ತುಮಕೂರು ಎಂಬ ಶೀರ್ಷಿಕೆಯಲ್ಲಿ ಸಮಾಜದ ಉದ್ಧಾರಕ್ಕಾಗಿ ಬದುಕುವ ಸಹೃದಯಿಗಳು ಸೇರಿ ಸಶಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಸಂಕಲ್ಪ ಮಾಡಬೇಕಿದೆ.

ಮೇಲಿನ ಸೇವಾ ಪರಿಕಲ್ಪನೆಯ ವಿಚಾರದಲ್ಲಿ ಚರ್ಚಿಸಲು ಸಮಾಜಸೇವೆಯ ಮನೋಧರ್ಮದ ಬುದ್ದಿ ಜೀವಿಗಳು ಮೇ-7ರಂದು ಬುಧುವಾರ ಬೆಳೆಗೆ 10 ಗಂಟೆಗೆ ತುಮಕೂರು ವಿಶ್ವವಿದ್ಯಾಲಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ ತುಮಕೂರು ಜಿಲ್ಲೆಯ ಸೇವಾ ಧುರೀಣರು ಈ ಸಭೆಯಲ್ಲಿ ಭಾಗವಹಿಸಿ ತುಮಕೂರು ಜಿಲ್ಲೆಯ ಅಭಿವೃದ್ಧಿಯ ಹಾದಿಗೆ ಮಹತ್ವದ ಬೆಳಕು ಚೆಲ್ಲಲು ರಘು ಗೌಡ ಮನವಿ ಮಾಡಿದ್ದಾರೆ.

 

 

Share This Article
error: Content is protected !!
";