ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಸಚಿವ ಡಿ.ಸುಧಾಕರ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರಂಗೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತದ ಐದು ವರ್ಷಗಳ ಅವಧಿಗೆ ಭಾನುವಾರ ಚುನಾವಣೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಪ್ರತಿನಿಧಿಸುವ ಸಹಕಾರ ಸಂಘವಾಗಿದೆ.

ಚುನಾವಣೆ ಭಾರಿ ಬಿರುಸಿನಿಂದ ಕೂಡಿದ್ದು, ಈ ಭಾರಿ ಸಾಲಗಾರರು, ಸಾಲಗಾರರಲ್ಲದ ಕ್ಷೇತ್ರದಿಂದ ಕೆಲವೊಂದು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ.

- Advertisement - 

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆ.ಎಸ್.ಶ್ರೀಧರ ಈ ಬಗ್ಗೆ ಮಾಹಿತಿ ನೀಡಿ, ಸಂಘದ ಎಸ್ಟಿ ಮೀಸಲು ಸ್ಥಾನದಿಂದ ಕೆ.ಆರ್.ಸುರೇಶ್-೨೩೯ ಮತಗಳನ್ನು ಗಳಿಸಿ ಆಯ್ಕೆಯಾಗಿದ್ದು, ಎದುರಾಳಿ ಹಿರಿಯ ಸಹಕಾರಿ ಧುರೀಣ ಸಿ.ಓಬಯ್ಯ-೧೫೪ ಮತಪಡೆದು ಪರಾಭವಗೊಂಡಿದ್ಧಾರೆ.

ಬಿಸಿಎಂ ಎ ಕ್ಷೇತ್ರದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ಬಿ.ತಿಪ್ಫೇಸ್ವಾಮಿ, ಬಿಸಿಎಂ ಬಿ ಕ್ಷೇತ್ರದಿಂದ ಎಂ.ಕುಮಾರಸ್ವಾಮಿ, ಮಹಿಳಾ ಕ್ಷೇತ್ರದಿಂದ ಬೋರಮ್ಮ, ಕಮಲಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ರಾಮಚಂದ್ರನಾಯಕ ಚುನಾಯಿತರಾಗಿದ್ಧಾರೆ.

- Advertisement - 

ಚುನಾವಣೆ ಘೋಷಣೆಯಾದ ನಂತರ ನಾಮಪತ್ರ ವಾಪಾಸ್ ಪಡೆಯುವ ಸಂದರ್ಭದಲ್ಲಿ ಪರಸ್ವರ ಚರ್ಚೆ ನಡೆದು ಒಟ್ಟು ೫ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಬಿ.ಸಿ.ಸಂಜೀವಮೂರ್ತಿ, ಶಾಂತಣ್ಣ, ರಾಜಣ್ಣ, ತಿಪ್ಫೇರುದ್ರಪ್ಪ ಆಯ್ಕೆಯಾದವರು.  

Share This Article
error: Content is protected !!
";