ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೋಲ್ಡ್ಸ್ಮಗ್ಲರ್ ನಟಿ ರನ್ಯಾ ರಾವ್ಯಾರು ಎಂದು ಗೊತ್ತೇ ಇಲ್ಲ ಎನ್ನುತ್ತಿದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ ಹಾಗೂ ಕರ್ನಾಟಕ ಕಾಂಗ್ರೆಸ್ ನಾಯಕರ ನಿಜಬಣ್ಣ ಈಗ ಒಂದೊಂದೆ ಬಯಲಾಗುತ್ತಿದೆ ಎಂದು ಜೆಡಿಎಸ್ ದೂರಿದೆ.
ಗೃಹ ಸಚಿವರ ಶಿಕ್ಷಣ ಸಂಸ್ಥೆಯಿಂದ ಗೋಲ್ಡ್ಸ್ಮಗ್ಲರ್ರನ್ಯಾಗೆ 40 ಲಕ್ಷ ರೂ. ಕ್ರೆಡಿಟ್ಕಾರ್ಡ್ಬಿಲ್ಪಾವತಿಸಲಾಗಿದೆ. ಪರಮೇಶ್ವರ್ಅವರು, ರನ್ಯಾ ಮದುವೆ ವೇಳೆ 20 ಲಕ್ಷ ರೂ. ಗಿಫ್ಟ್ಕೊಟ್ಟಿದ್ದಾರೆ ಎಂದು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ಸರ್ಕಾರದ ಸಚಿವರು ತಮ್ಮಲ್ಲಿರುವ ಬ್ಲ್ಯಾಕ್ಮನಿಯನ್ನು ಆಕೆಯನ್ನು ಬಳಸಿಕೊಂಡು ಗೋಲ್ಡ್ಮನಿಯಾಗಿ ಬದಲಾಯಿಸಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಚಿನ್ನಕಳ್ಳಸಾಗಾಣೆ ಪ್ರಕರಣದಲ್ಲಿ ಕೇವಲ ಒಬ್ಬ ಸಚಿವರು ಇದ್ದಾರೆಯೇ ಅಥವಾ ಮತ್ತಷ್ಟು ಮಂತ್ರಿಗಳು ಇದ್ದಾರೆಯೇ ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಿ, ತಮ್ಮ ನೈತಿಕತೆಯನ್ನು ಪ್ರದರ್ಶಿಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.