ಹನಿಟ್ರ್ಯಾಪ್‌, ಫೋನ್ ಟ್ಯಾಪ್, ಕೊಲೆ ಯತ್ನ ಅಂತ ಬೊಬ್ಬಿರಿದ ಸಚಿವ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್‌
, ಫೋನ್ ಟ್ಯಾಪ್, ಕೊಲೆ ಯತ್ನ ಅಂತ ಬೊಬ್ಬಿರಿದ ಕರ್ನಾಟಕ ಕಾಂಗ್ರೆಸ್ ಸಚಿವರು ಈಗ ಸುಮ್ಮನಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಮಾನವನ್ನು ಪಣಕ್ಕಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

- Advertisement - 

ಕಾಂಗ್ರೆಸ್‌ ಪಕ್ಷದಲ್ಲಿನ ಕುರ್ಚಿ ಕಿತ್ತಾಟದ ಮುಂದುವರಿದ ಭಾಗವಾಗಿ ಪ್ರಕರಣ ನಡೆದಿದೆ ಎಂಬ ಅನುಮಾನ ನಿಜವಾಗಿದೆ. ವಿಚಾರಣೆಗೆ ಕರೆದರೆ ಹಬ್ಬದ ಬಳಿಕ ಬರುವೆ ಎನ್ನುತ್ತಾ ದಿನ ದೂಡುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.

- Advertisement - 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನಿಟ್ರ್ಯಾಪ್‌ ಪ್ರಕರಣದ ಬಗ್ಗೆ ಬಾಯಿ ಬಿಡದೆ, ಪ್ರಕರಣವನ್ನು ಮುಚ್ಚಲು ಪೂರ್ಣ ತಯಾರಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

 

- Advertisement - 

Share This Article
error: Content is protected !!
";