ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ: ಶಾಸಕ ಡಾ. ಶ್ರೀನಿವಾಸ್

News Desk

ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ  ಡಾ. ಶ್ರೀನಿವಾಸ್ ಎನ್ ಟಿ ರವರು ಕೂಡ್ಲಿಗಿ ತಾಲೂಕು  ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭಾಂಗಣ ನಿರ್ಮಾಣ (
191. 91 ಲಕ್ಷಗಳು) ವೆಚ್ಚದಲ್ಲಿ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಆರೋಗ್ಯ ಸೇವೆ  ಮತ್ತು ಅದರ ಗುಣಮಟ್ಟ ಅಗತ್ಯ ಬಡವ ಬಲಿದರೆನ್ನದೆ ಎಲ್ಲರಿಗೂ ಒಳ್ಳೆಯ ವೈದ್ಯಕೀಯ ಪಡೆಯುವ ಹಕ್ಕಿದೆ ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

- Advertisement - 

ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಆರೋಗ್ಯ ಸಿಬ್ಬಂದಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಮತ್ತು ರೋಗಿಗಳನ್ನು ವಿನಾ ಕಾರಣ ಅಲೆದಾಡಿಸದೆ ಚಿಕಿತ್ಸೆ ನೀಡಬೇಕು ಅದು ನಿಮ್ಮಗಳ ಕರ್ತವ್ಯ ಎಂದು ಶಾಸಕರು ಹೇಳಿದರು.

- Advertisement - 

ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪಟ್ಟಣ ಅಧ್ಯಕ್ಷರು ಪಂಚಾಯತಿ ಸದಸ್ಯರುಗಳು ಮುಖಂಡರು ಯುವಕರು ಉಪಸ್ಥಿತರಿದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

 

- Advertisement - 

 

Share This Article
error: Content is protected !!
";