ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಮೋದಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳದ ತಿರುವನಂತಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಹಾಗೂ ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಕಾರ್ಯಕ್ರಮದಲ್ಲಿ ರೈತ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಪ್ರಧಾನಿಗಳು, ತಿರುವನಂತಪುರಂ – ಚೆರ್ಲಪಲ್ಲಿ ಅಮೃತ್ ಭಾರತ್‌ಎಕ್ಸ್‌ಪ್ರೆಸ್‌ರೈಲು, ತಿರುವನಂತಪುರಂ – ತಂಬರಮ್‌ಅಮೃತ್‌ಭಾರತ್‌ಎಕ್ಸ್‌ಪ್ರೆಸ್‌ರೈಲು, ನಾಗರಕೋಯಿಲ್‌- ಮಂಗಳೂರು ಅಮೃತ್‌ಭಾರತ್‌ಎಕ್ಸ್‌ಪ್ರೆಸ್‌ರೈಲು ಹಾಗೂ ತ್ರಿಸ್ಸೂರ್‌- ಗುರುವಾಯೂರ್‌ಪ್ಯಾಸೆಂಜರ್‌ರೈಲುಗಳಿಗೆ ಹಸಿರು ನಿಶಾನೆ ತೋರಿ, ಪಿಎಂ ಸ್ವನಿಧಿ ಕ್ರೆಡಿಟ್‌ಕಾರ್ಡ್‌ವಿತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು ಎಂದು ಸಚಿವ ಸೋಮಣ್ಣ ತಿಳಿಸಿದರು.

- Advertisement - 

ಈ ಸಂದರ್ಭದಲ್ಲಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ರಾಜೀವ್‌ಚಂದ್ರಶೇಖರ್‌ಅವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

- Advertisement - 

 

 

 

Share This Article
error: Content is protected !!
";