ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೋದಿ ಸರ್ಕಾರದ ಉತ್ತರದ ಪ್ರೀತಿ, ತಾರತಮ್ಯ ನೀತಿ ರಾಜ್ಯವನ್ನು ನಿರಂತರ ಶಾಪವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಯಾವುದೇ ಹೊಸ ಯೋಜನೆಗಳಿಗೂ ಅನುಮತಿ ನೀಡುತ್ತಿಲ್ಲ.ಜಿಎಸ್ಟಿ ತೆರಿಗೆ ಪಾಲಿನಲ್ಲೂಅನ್ಯಾಯ ಎಸಗುತ್ತಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನವನ್ನೂ ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋಗೆ ಸ್ಥಳಾಂತರಿಸಲು ಮುಂದಾಗಿತ್ತು ಮೋದಿ ಸರ್ಕಾರ!
ಆದರೆಅಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಅವಿರತ ಪ್ರಯತ್ನ, ಇಚ್ಛಾಶಕ್ತಿಯಿಂದಾಗಿ ಮತ್ತೊಮ್ಮೆ ಬೆಂಗಳೂರಿನ ಆಗಸದಲ್ಲಿ ಲೋಹದ ಹಕ್ಕಿಗಳ ಬಣ್ಣದ ಚಿತ್ತಾರ, ಸಾಹಸದ ಚಮತ್ಕಾರ ಕಣ್ಮನ ಸೆಳೆಯುತ್ತಿದೆ! ಎಂದು ಕಾಂಗ್ರೆಸ್ ಹೇಳಿದೆ.