ಜು.27 ರಂದು ಮಾಸಿಕ ಗಮಕ ಕಾರ್ಯಕ್ರಮ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗದಲ್ಲಿ ಗಮಕ ಕಲಾಭಿಮಾನಿಗಳ ಸಂಘ ಸ್ಥಾಪನೆಯಾಗಿ ನಾಲ್ಕು ದಶಕಗಳು ಸಂದಿರುವ ಸವಿನೆನಪಿಗಾಗಿ ನಡೆಸುತ್ತಿರುವ ಮಾಸಿಕ ಗಮಕ ಸಂಭ್ರಮದ 24ನೇ ಕಾರ್ಯಕ್ರಮವು ಸ್ಥಳೀಯ ವಿಶ್ವ ಹಿಂದೂ ಪರಿಷತ್ತಿನ ನೆರವಿನೊಂದಿಗೆ ಜು.27 ರಂದು ಭಾನುವಾರ ಸಂಜೆ 6 ಗಂಟೆಗೆ  ನಗರದ ವಿ.ಪಿ.ಬಡಾವಣೆಯ 3ನೇ ತಿರುವಿನಲ್ಲಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದ ಸಭಾಂಗಣದಲ್ಲಿ(ಅಭಿರಾಮ್ ಕೆಫೆಯ ಹತ್ತಿರ)ನಡೆಯಲಿದೆ.

ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದ ವೀರ ಬಾಹುಕಂಗೆ  ಆಳಾದನಾಹರಿಶ್ಚಂದ್ರಎಂಬ ಭಾಗವನ್ನು ಕುಮಾರಿ ಭಾರ್ಗವಿ ಹಾಗೂ ಕುಮಾರಿ  ತನ್ಮಯಿ ವಾಚಿಸಿದರೆ, ಲೇಖಕಿ ಡಾ.ಯಶೋದ ರಾಜಶೇಖರಪ್ಪ,  ವ್ಯಾಖ್ಯಾನಿಸುವರು.

- Advertisement - 

ಚಿತ್ರದುರ್ಗ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಅರುಣಕುಮಾರ್  ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ,ಕಾವ್ಯ ಆಸ್ವಾದಿಸಿ, ಕನ್ನಡದ ಬೆಳವಣಿಗೆಗೆ ಸಹಕರಿಸಲು ಸಂಘದ ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";