ಆರ್.ಎಸ್ಎಸ್ ಗಣವೇಷದಾರಿಗಳಿಂದ ಪಥಸಂಚಲನ
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಶುಕ್ರವಾರದಂದು ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪಥಸಂಚಲನ ಮಾರ್ಗದಲ್ಲಿ ನೆರದಿದ್ದ ಸಾರ್ವಜನಿಕರು ನಗರದ ನಾಗರೀಕರು, ಭಾರತಮಾತೆಗೆ ಹಾಗೂ ಗಣವೇಷದಾರಿಗಳಿಗೆ ಪಥಸಂಚಲನದ ದಾರಿಯುದ್ದಕ್ಕೂ ಪುಷ್ಪನಮನವನ್ನು ಸಲ್ಲಿಸಲಾಯಿತು.
ಈ ಪಥಸಂಚಲನವು ನೆಹರು ಮೈದಾನದಿಂದ ಆರಂಭಗೊಂಡು ಶ್ರೀತೇರುಮಲ್ಲೇಶ್ವರ ದೇವಸ್ಥಾನದ ಮುಂಭಾಗದಿಂದ ಸಿದ್ಧನಾಯಕ ಸರ್ಕಲ್, ಸುಣ್ಣಗಾರ್ ಸರ್ಕಲ್, ರಾಮ ಮಂದಿರರಸ್ತೆ, ಮಾರ್ಗವಾಗಿ ಆಸ್ಪತ್ರೆ ಸರ್ಕಲ್, ಚರ್ಚ್ ರಸ್ತೆ, ಮುಖಾಂತರ ಹುಳಿಯಾರುರಸ್ತೆ, ಗಾಂಧಿವೃತ್ತದ ಮೂಲಕ ಸಂಚರಿಸಿ, ಅಂತಿಮವಾಗಿ ನೆಹರು ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮುಕ್ತಾಯ ಗೊಳಿಸಲಾಯಿತು.
ಈ ಪಥಸಂಚಲನದಲ್ಲಿ ಸುಮಾರು 250 ಕ್ಕೂ ಹೆಚ್ಚು ಗಣವೇಷದಾರಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಮುಖಂಡರಾದ ಪ್ರಭಾಕರ್, ಲಕ್ಷ್ಮೀಕಾಂತ್, ಅಭಿನಂದನ್, ಎಂ.ಎಸ್.ರಾಘವೇಂದ್ರ, ವಿ.ವಿಶ್ವನಾಥ್, ಎ.ರಾಘವೇಂದ್ರ, ಜೈರಾಮ್, ಹೆಚ್.ವೆಂಕಟೇಶ್, ನಾರಾಯಣಸಿಂಗ್ ಜೋದ, ಮೋಹನ್ ಸಿಂಗ್, ಶರವಣಸಿಂಗ್, ಗಣಪತ್ ಸಿಂಗ್, ಜಬ್ಬರ್ ಸಿಂಗ್, ಎಂ.ವಿ.ಹರ್ಷ, ಎ.ಚೇತನಬಾಬು, ಚಂದ್ರಹಾಸ, ಜಿ.ಬಿ.ರಾಜು, ಸೇರಿದಂತೆ ಹಲವಾರು ಸ್ವಯಂಸೇವಕ ಮುಖಂಡರುಗಳು ಭಾಗವಹಿಸಿದ್ದರು.

