ರೈಲ್ವೆ ಸ್ಟೇಷನ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿ-ನಗರಸಭಾ ಸದಸ್ಯೆ ಇಂದ್ರಾಣಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಅಪಘಾತಗಳ ತಾಣವಾಗಿದೆ
, ರಸ್ತೆ ಅಪಘಾತಗಳಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ, ಟ್ರಾಫಿಕ್ ಸಿಗ್ನಲ್ ಲೈಟ್ಸ್ ಹಾಕಿಸುವಂತೆ ಶಾಸಕರಾದ ಧೀರಜ್ ಮುನಿರಾಜುರವರಿಗೆ ಸಿದ್ದೇನಾಯಕನಹಳ್ಳಿ ನಗರಸಭಾ ಸದಸ್ಯರಾದ ಇಂದ್ರಾಣಿ.ವಿ ಮನವಿ ಮಾಡಿದ್ದಾರೆ.

- Advertisement - 

ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ ಸರ್ಕಲ್ ಪ್ರಮುಖ ಸ್ಥಳವಾಗಿದೆ, ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ 9, ದೊಡ್ಡಬಳ್ಳಾಪುರ ನಗರಕ್ಕೆ ಸಂಪರ್ಕಿಸುವ ರಸ್ತೆ, ರೈಲ್ವೆ ನಿಲ್ದಾಣ, ಅಪರೆಲ್ ಪಾರ್ಕ್ ಮತ್ತು ದೇವನಹಳ್ಳಿ ಮಾರ್ಗದ ರಸ್ತೆ ಇದೇ ಸರ್ಕಲ್ ಮೂಲಕ ಹಾದು ಹೋಗುವೆ, ಪ್ರತಿದಿನ ಸಾವಿರಾರು ವಾಹನಗಳು ಸಂಚಾರಿಸುವ ಪ್ರಮುಖ ಸರ್ಕಲ್ ಆಗಿದೆ.

- Advertisement - 

ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಇರುವುದರಿಂದ ಪದೇ ಪದೇ ರಸ್ತೆ ಅಪಘಾತಗಳು ಈ ಸ್ಥಳದಲ್ಲಿ ಸಂಭವಿಸುತ್ತಿವೆ, ರಸ್ತೆ ಅಪಘಾತಗಳಿಂದ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ, ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಹಾಕುವಂತೆ ಶಾಸಕರಾದ ಧೀರಜ್ ಮುನಿರಾಜುರವರಿಗೆ ಮನವಿ ಮಾಡಿದ್ದಾರೆ.

 

- Advertisement - 

Share This Article
error: Content is protected !!
";