ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆನೆಬಾಗಿಲು ಬಳಿ ನಗರಸಭೆಯ ಅನುದಾನ ೩೦ ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಅಭಿವೃದ್ದಿ ಕಾಮಗಾರಿಗೆ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ನಗರಸಭೆ ಅನುದಾನದಲ್ಲಿ ಕೈಗೊಳ್ಳುವ ಈ ಕಾಮಗಾರಿಯ ಜೊತೆ ಪುರಾತನವಾದ ಆನೆಬಾಗಿಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ದಿಪಡಿಸಲು ೩೦ ರೂ.ಗಳನ್ನು ಖರ್ಚು ಮಾಡಲಾಗುವುದೆಂದು ಅನಿತಾ ರಮೇಶ್ ತಿಳಿಸಿದರು.
ನಗರಸಭೆ ಸದಸ್ಯ ಜೆ.ಶಶಿಧರ್, ಮಾಜಿ ಸದಸ್ಯ ಟಿ.ರಮೇಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದ್ರಿನಾಥ್, ವೇದಪ್ರಕಾಶ್ಬಾಬಣ್ಣ, ನಾಗರಾಜ್ಬೇದ್ರೆ, ಗೋಪಾಲ್ರಾವ್ ಜಾಧವ್, ಶ್ಯಾಂಪ್ರಸಾದ್, ಬಾಬುಲಾಲ್ಜೈನ್, ಶ್ರೇಣಿಕ್, ಜ್ಯೋತಿ ಲಕ್ಷ್ಮಣ್, ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ಇಂಜಿನಿಯರ್ಗಳು ಈ ಸಂದರ್ಭದಲ್ಲಿ ಹಾಜರಿದ್ದರು.

