ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ಒಳಮೀಸಲಾತಿ ಪತ್ರಿಕಾಗೋಷ್ಠಿ ನಡೆಸಲಾಯಿತು.ಇದೇ ತಿಂಗಳ 05 ರಿಂದ 17ರವರೆಗೆ ಸರ್ಕಾರದಿಂದ ಪರಿಶಿಷ್ಟ ಜಾತಿಯ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಬಂಧುಗಳು, ಕೋಡ್ ನಂ 61′ಮಾದಿಗ‘ ಎಂದು ನೊಂದಾಯಿಸಬೇಕು ಎಂದು ಕರೆ ನೀಡಲಾಯಿತು.
ನಗರಸಭಾ ಸದಸ್ಯ ಎಂ ಡಿ ಸಣ್ಣಪ್ಪ ಮಾತನಾಡಿ, ಸಮುದಾಯದ ಬಂಧುಗಳು, ಯಾವುದೇ ಧರ್ಮ ಆಚರಣಿಯಲ್ಲಿದ್ದರೂ, ಸಮೀಕ್ಷೆಯಲ್ಲಿ ನೊಂದಾಯಿಸುವಾಗ , ಸ್ಪಷ್ಟವಾಗಿ ಮಾದಿಗ ಎಂದು ನಮೂದಿಸಬೇಕು. ಕೋಡ್ ನಂ 61 ಎಂದು ಬರೆಸಬೇಕು,ಈ ಮೂಲಕ ನಮ್ಮ ಸಮುದಾಯದ ಸಂಖ್ಯೆಯನ್ನು ಹೆಚ್ಚಿಸಲು ಕರೆನೀಡಿದರು .
ಸರ್ಕಾರಿ ಮಾದಿಗ ನೌಕರರ ಸಂಘದ ಅಧ್ಯಕ್ಷ, ಉಪನ್ಯಾಸಕ ರಾಮಣ್ಣ, ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬ್ಯಾಡರಹಳ್ಳಿ ಪಾತಪ್ಪ, ಶಿಕ್ಷಕರಾದ S ಮಂಜುನಾಥ, ಸೀಗೇಹಟ್ಟಿ ಶಿವಶಂಕರ್, ಕೋಟಿಲಿಂಗಯ್ಯ, ವಕೀಲ ಬಬ್ಬೂರು ರಂಗಸ್ವಾಮಿ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತ, ಸಮುದಾಯದ ಮುಖಂಡರಾದ ಕೆ ಆರ್ ಹಳ್ಳಿ ರಘುನಾಥ, ಬೋರನಕುಂಟೆ ಜೀವೇಶ್,
ಕೆ ಪಿ ಶ್ರೀನಿವಾಸ್, ಹರ್ತಿಕೋಟೆ ದಯಾನಂದ, ಕದುರಪ್ಪ ಶಿಡ್ಲಯನಕೋಟೆ, ಮಾರುತೇಶ್ ಕೂನಿಕೆರೆ, ರಾಘವೇಂದ್ರ ಈಶ್ವರಗೆರೆ, ಎಂಡಿ ಕೋಟೆ ಪರಮೇಶ್ವರಪ್ಪ, ಚಂದ್ರಣ್ಣ, ಬ್ಯಾಡರಹಳ್ಳಿ ಹನುಮಂತರಾಯ, ಮಹೇಶ್ ಕಾಟನಾಯಕನಹಳ್ಳಿ, ಶಿವು ಖಂಡೇನಹಳ್ಳಿ, ಹಿರಿಯೂರು ಪ್ರದೀಪ್ ಮುಖಂಡರು ಉಪಸ್ಥಿತರಿದ್ದರು.