ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿರುವ 54ನೇ ಶ್ರೀ ಶಕ್ತಿ ಗಣಪತಿ ಮಹೋತ್ಸವದಲ್ಲಿ ಗಾಯಕಿ ಶಮಿತಾ ಮಲ್ನಾಡ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ವೇಳೆ ಸಮಿತಿಯಿಂದ ಶಮಿತಾ ಮಲ್ನಾಡ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ರಾಜು, ಸೂರ್ಯ ಟಿವಿ ಸೆಂಟರ್ ಮಾಲೀಕ ಸುರೇಶ್, ರಿಯಲ್ ಎಸ್ಟೇಟ್ ಉದ್ಯಮಿ ಆಲಮರದಹಟ್ಟಿ ರಂಗಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ ವೆಂಕಟೇಶ್ ಹಾಗೂ ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಖಾದಿ ರಮೇಶ್, ರಮೇಶ್ ಬಾಬು, ಗುಜ್ಜಾರ್ ಗೌಡ, ಲಿಂಗರಾಜು, ನಗರಸಭೆ ನಾಮ ನಿರ್ದೇಶನ ಸದಸ್ಯ ಶಿವಣ್ಣ, ಅಜೀಂ ಪಾಷಾ,ವಿ. ಶಿವಕುಮಾರ್, ಶಿಕ್ಷಕ ನರಸಿಂಹಮೂರ್ತಿ, ಯುವ ಮುಖಂಡ ದರ್ಶನ್, ಮಾರುತಿ, ಹರೀಶ್ ಸೇರಿದಂತೆ ಮತ್ತಿತರರು ಇದ್ದರು.

