ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರಾಗಿ ನಾರಾಯಣಸ್ವಾಮಿ-ಉಪಾದ್ಯಕ್ಷರಾಗಿ ಆನಂದಮ್ಮ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ನಾರಾಯಣಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಆನಂದಮ್ಮ ನವರು ಅವಿರೋಧವಾಗಿ ಆಯ್ಕೆ ನೂತನ ಅಧ್ಯಕ್ಷರು ಹಾಗು ಉಪಾಧ್ಯಕ್ಷರಿಗೆ
  ಬಾಶೆಟ್ಟಿಹಳ್ಳಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

- Advertisement - 

 ಬಾಶೆಟ್ಟಿಹಳ್ಳಿ ಹಿರಿಯ ರಾಜಕೀಯ ಮುಖಂಡರಾದ ಬಿ.ಕೃಷ್ಣಪ್ಪನವರು ಮಾತನಾಡಿ ಎಲ್ಲಾ ನಿರ್ದೇಶಕರು ಮತ್ತು ಅಧ್ಯಕ್ಷರು ಉಪಾಧ್ಯಕ್ಷರಿಗೆ   ಕಿವಿಮಾತು ಹೇಳುತ್ತಾ ರಾಜಕೀಯ ಮರೆತು ಇನ್ನು ಮಂದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೇ ಕಿವಿಮಾತು ಹೇಳಿದರು.

- Advertisement - 

 ಪ್ರೇಮ್ ಕುಮಾರ್ ಮಾತನಾಡಿ ನಮ್ಮ ವಿಎಸ್ ಎಸ್ ಎನ್ ಕಟ್ಟಡ ಬಹಳಷ್ಟು ಶಿಥಿಲಗೊಂಡಿದ್ದು ಆದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಬೇಕೆಂದು ಹೇಳಿದರು. ಡಾ. ವಿಜಯ್  ಕುಮಾರ್ ಮಾತನಾಡುತ್ತಾ ವಿ ಎಸ್ ಎಸ ಎನ್ ಕಟ್ಟಡಕ್ಕೆ ತಾವೇ ಮೊದಲ ದೇಣಿಗೆ ಕೊಡುವುದಾಗಿ ಹೇಳಿದರು.

 ಈ ಸಂದರ್ಭದಲ್ಲಿ ಬಾಶೆಟ್ಟಿಹಳ್ಳಿ  ವ್ಯವಸಾಯೋತ್ಪನ್ನ ಸಹಕಾರ ಸಂಘದ.  ಪಧಾದಿಕಾರಿಗಳು ಹಾಗು ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.

- Advertisement - 

 

Share This Article
error: Content is protected !!
";