ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗಂಗಾ ಸಮೂಹ ವಿದ್ಯಾ ಸಂಸ್ಥೆಗಳು, ಹಿರಿಯೂರು, EPFO ರಿಜನಲ್ ಆಫೀಸ್, ಬಳ್ಳಾರಿ ಹಾಗೂ ESIC ಜಿಲ್ಲಾ ಕೇಂದ್ರ, ಚಿತ್ರದುರ್ಗ ಇವರ ಸಹಯೋಗದಲ್ಲಿ ಜಿಲ್ಲಾ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಚೀಫ್ ಅಕೌಂಟ್ಸ್ ಆಫೀಸರ್ ಶ್ರೀಕಾಂತ್ ಗುಮ್ಮಡಿವಲ್ಲಿ ಮತ್ತು ಜುಬೇರ ಅಹ್ಮದ್, ಮಹಮದ್ ಅನಿಫ್ ಹಾಗೂ ESIC ಜಿಲ್ಲಾ ಮುಖ್ಯಸ್ಥರಾದ ಮುರುಗೇಶ್ ಸರ್ ಉಪಸ್ಥಿತರಿದ್ದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಎಲ್ಲಾ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ EPF ಮತ್ತು ESI ಯೋಜನೆಗಳ ಉದ್ದೇಶ, ಸೌಲಭ್ಯಗಳು, ಉದ್ಯೋಗಿಗಳ ಹಕ್ಕುಗಳು ಹಾಗೂ ನೋಂದಣಿ ಪ್ರಕ್ರಿಯೆಗಳ ಕುರಿತು ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮವು ಶಿಕ್ಷಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು. EPF ಕುರಿತು ಸಮಗ್ರ ಮಾಹಿತಿಯನ್ನು ನೀಡುವುದರೊಂದಿಗೆ ಶಿಕ್ಷಕರಿಗೆ ಇದ್ದಂತಹ ಗೊಂದಲಗಳನ್ನು ಸಹ ಪರಿಹರಿಸಿದರು.




