Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲ್ನಡಿಗೆಯಲ್ಲೇ ತಿರುಮಲ ಬೆಟ್ಟ ಹತ್ತಿದ ಕರ್ನಾಟಕದ 116 ವರ್ಷದ ‘ವೈರಲ್ ಅಜ್ಜಿ’ಗೆ ವಿಐಪಿ ದರ್ಶನ ಭಾಗ್ಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ತಿರುಪತಿ:
ಭಕ್ತಿ ಮತ್ತು ಅಚಲ ಸಂಕಲ್ಪವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಕರ್ನಾಟಕದ ೧೧೬ ವರ್ಷದ ವೃದ್ಧೆಯೊಬ್ಬರು ಸಾಬೀತುಪಡಿಸಿದ್ದಾರೆ. ಸಾಂಪ್ರದಾಯಿಕ ಅಲಿಪಿರಿ ಕಾಲುದಾರಿಯ ಮೂಲಕ ನಡೆದೇ ತಿರುಮಲ ಬೆಟ್ಟವನ್ನು ಏರಿದ ಈ ವೈರಲ್ ಅಜ್ಜಿಯ ಅಸಾಮಾನ್ಯ ಭಕ್ತಿಗೆ ಮೆಚ್ಚಿದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್, ಅವರಿಗೆ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಕಲ್ಪಿಸಿ ಗೌರವಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಅಜ್ಜಿಯ ಪಾದಯಾತ್ರೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

೧೧ ಕಿಲೋಮೀಟರ್ ನಡೆದೇ ಸಾಗಿದ ಅಜ್ಜಿ!:
ತಿರುಪತಿಯಿಂದ ತಿರುಮಲ ಬೆಟ್ಟದವರೆಗೆ ಇರುವ ಸುಮಾರು ೧೧ ಕಿಲೋಮೀಟರ್ ಉದ್ದದ ಕಠಿಣವಾದ ಅಲಿಪಿರಿ ಕಾಲುದಾರಿಯನ್ನು ಈ ಇಳಿವಯಸ್ಸಿನಲ್ಲೂ ಅಜ್ಜಿ ಯಾವುದೇ ಆಸರೆಯಿಲ್ಲದೆ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಸಾವಿರಾರು ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿ ತಲುಪಿದ ಇವರ ದೃಢಸಂಕಲ್ಪವನ್ನು ಕಂಡು ಸಹಜವಾಗಿಯೇ ಅಲ್ಲಿದ್ದ ಭಕ್ತರು ಹಾಗೂ ಟಿಟಿಡಿ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಶೇಷ ಗೌರವ ನೀಡಿದ ಟಿಟಿಡಿ:
ಅಜ್ಜಿಯ ಅಸಾಧಾರಣ ಭಕ್ತಿ ಮತ್ತು ಪರಿಶ್ರಮವನ್ನು ಗೌರವಿಸಿದ ಟಿಟಿಡಿ ಅಧಿಕಾರಿಗಳು, ಸಾಮಾನ್ಯ ಸಾಲಿನಲ್ಲಿ ನಿಲ್ಲಿಸದೇ ಅವರಿಗೆ ಸುಗಮವಾಗಿ ದೇವರ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಿದರು.

ಖುದ್ದಾಗಿ ಕರೆದೊಯ್ದ ಸಿಬ್ಬಂದಿ: ಟಿಟಿಡಿಯ ಸಿಬ್ಬಂದಿಯೇ ಖುದ್ದಾಗಿ ವೃದ್ಧೆ ಮತ್ತು ಅವರೊಬ್ಬ ಸಂಬಂಧಿಯನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಿ ದೇಗುಲದ ಒಳಗಿನ ಗರ್ಭಗುಡಿ ಸಿಬ್ಬಂದಿಗೆ ಒಪ್ಪಿಸಿದರು.

ಧನ್ಯತಾ ಭಾವ ಮೂಡಿಸಿದ ದರ್ಶನ: ಅಜ್ಜಿ ಯಾವುದೇ ತೊಂದರೆಯಿಲ್ಲದೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ದೇವರಿಗೆ ಕೈಮುಗಿದು ಆಶೀರ್ವಾದ ಪಡೆದರು.

"ಲಕ್ಷಾಂತರ ಭಕ್ತರಿಗೆ ಈ ಅಜ್ಜಿಯೇ ಸ್ಫೂರ್ತಿ":
ಈ ಕುರಿತು ಪ್ರತಿಕ್ರಿಯಿಸಿರುವ ಟಿಟಿಡಿ ಅಧಿಕಾರಿಗಳು, "೧೧೬ ವರ್ಷದ ಭಕ್ತೆಯ ಈ ನಿಷ್ಠೆ ಮತ್ತು ದೇವರ ಮೇಲಿನ ಅಚಲ ವಿಶ್ವಾಸವು ಪ್ರತಿವರ್ಷ ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ. ಇವರ ಭಕ್ತಿ ಎಲ್ಲ ವಯೋಮಾನದವರಿಗೂ ಆದರ್ಶ," ಎಂದು ಕೊಂಡಾಡಿದ್ದಾರೆ.

ಭಕ್ತಿಗೆ ವಯಸ್ಸಿನ ಮಿತಿಯಿಲ್ಲ’:
ಸಾಮಾಜಿಕ ಜಾಲತಾಣಗಳಲ್ಲೂ ಈ ಶತಾಯುಷಿ ಅಜ್ಜಿಯ ಧೈರ್ಯ, ದೈಹಿಕ ಸಾಮರ್ಥ್ಯ ಮತ್ತು ಅಚಲ ಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಪವಿತ್ರ ಪಾದಯಾತ್ರೆಯ ಮೂಲಕ ಆ ಅಜ್ಜಿ, "ಭಕ್ತಿಗೆ ವಯಸ್ಸಿನ ಮಿತಿಯಿಲ್ಲ; ದೃಢ ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯವಲ್ಲ" ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.