LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇವಸ್ಥಾನಗಳ ಹುಂಡಿ ಹಣ, ಚಿನ್ನಾಭರಣ ಸುರಕ್ಷತೆಗೆ 19 ಸೂತ್ರಗಳ ಹೊಸ ಮಾರ್ಗಸೂಚಿ ಪ್ರಕಟ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಹುಂಡಿ ಕಳ್ಳತನ ಹಾಗೂ ಕಾಣಿಕೆ ಹಣ ದುರ್ಬಳಕೆ ಪ್ರಕರಣಗಳಿಂದ ಎಚ್ಚೆತ್ತಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಭದ್ರತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ. ದೇವಾಲಯಗಳ ಹುಂಡಿ, ನಗದು ಹಾಗೂ ಚಿನ್ನ-ಬೆಳ್ಳಿ ವಸ್ತುಗಳ ರಕ್ಷಣೆಗಾಗಿ ಕಂದಾಯ ಇಲಾಖೆಯು (ಮುಜರಾಯಿ) ವಿಸ್ತೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ಕುರಿತು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಮುಜರಾಯಿ ಇಲಾಖೆ ಜಾರಿಗೆ ತಂದಿರುವ 19 ಪ್ರಮುಖ ನಿಯಮಗಳ ವಿವರ ಇಲ್ಲಿದೆ:

1. ಸಿಸಿಟಿವಿ ಹದ್ದಿನ ಕಣ್ಣು ಮತ್ತು ಪೊಲೀಸ್ ಕಂಟ್ರೋಲ್ ರೂಂಗೆ ಲೈವ್:
ನಾಲ್ಕು ದಿಕ್ಕಿನಿಂದ ನಿಗಾ: ಹುಂಡಿಯ ಸುತ್ತಲೂ 4 ದಿಕ್ಕಿನಿಂದ ಕಾಣುವಂತೆ ವೆಬ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದನ್ನು ತಹಶೀಲ್ದಾರ್ ಕಚೇರಿಯಿಂದಲೇ ನೇರ ವೀಕ್ಷಣೆ ಮಾಡಲು ವ್ಯವಸ್ಥೆ ಇರಬೇಕು.

ಸುಧಾರಿತ ಕ್ಯಾಮೆರಾ: ಕ್ಯಾಮೆರಾಗಳಿಗೆ ಬಣ್ಣ ಅಥವಾ ಸ್ಪ್ರೇ ಹೊಡೆದು ಕಳ್ಳತನ ಮಾಡುವುದನ್ನು ತಡೆಯಲು ಅತ್ಯಾಧುನಿಕ ಸುಧಾರಿತ ಸಿಸಿಟಿವಿಗಳನ್ನೇ ಬಳಸಬೇಕು.

ಕೇಂದ್ರ ಸರ್ವರ್ ಮತ್ತು ಪೊಲೀಸ್ ಕನೆಕ್ಷನ್: ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ದೇವಸ್ಥಾನದ ಸಿಸಿಟಿವಿ ಲೈವ್ ಫೀಡ್ ಅನ್ನು ಸ್ಥಳೀಯ ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಗೆ ಕಲ್ಪಿಸಬೇಕು.

2. ಡಿಜಿಟಲ್ ದೇಣಿಗೆ ಮತ್ತು ನಕಲಿ ಕ್ಯೂಆರ್ ಕೋಡ್ ತಡೆ:
ಯುಪಿಐ ಪಾವತಿಗೆ ಉತ್ತೇಜನ: ಜೇಬುಗಳ್ಳತನ ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ದೇಣಿಗೆ ಹಾಗೂ ಸೇವಾ ಟಿಕೆಟ್, ಪ್ರಸಾದ ವಿತರಣೆಗೂ ಯುಪಿಐ, ಭೀಮ್ ಪಾವತಿ ವ್ಯವಸ್ಥೆ ತರಬೇಕು. ಇದನ್ನು ದೇವಾಲಯದ ಲೆಕ್ಕಪತ್ರದೊಂದಿಗೆ ಲಿಂಕ್ ಮಾಡಬೇಕು.

ಹುಂಡಿ ಬಳಿ ಮಾತ್ರ ಕೋಡ್: ಕ್ಯೂಆರ್ ಕೋಡ್ ಅನ್ನು ಕೇವಲ ಹುಂಡಿಯ ಪಕ್ಕದಲ್ಲಿ ಮಾತ್ರ ಇಡಬೇಕು. ಕಿಡಿಗೇಡಿಗಳು ಹುಂಡಿ ಮೇಲಿರುವ ಕೋಡ್ ಮೇಲೆ ತಮ್ಮ ನಕಲಿ ಕ್ಯೂಆರ್ ಕೋಡ್ ಅಂಟಿಸದಂತೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಬೇಕು.

3. ಹುಂಡಿ ಎಣಿಕೆಗೆ ಕಟ್ಟುನಿಟ್ಟಿನ ಟೈಮ್ ಟೇಬಲ್:
ಕ್ಯಾಲೆಂಡರ್ ನಿಗದಿ: ಹುಂಡಿ ಎಣಿಕೆಗೆ ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ದಿನಾಂಕ ನಿಗದಿಪಡಿಸಬೇಕು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲೇ ಎಣಿಕೆ ನಡೆಯಬೇಕು.

ಅವಧಿ ನಿಗದಿ: ಹೆಚ್ಚು ಆದಾಯವಿರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಮತ್ತು ಸಾಧಾರಣ ಆದಾಯವಿರುವ ದೇವಾಲಯಗಳಲ್ಲಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಹುಂಡಿ ಎಣಿಕೆ ಮಾಡಬೇಕು. ಸಂಬಂಧಪಟ್ಟ ತಹಶೀಲ್ದಾರ್ ಇದರ ನೇರ ಉಸ್ತುವಾರಿ ವಹಿಸಬೇಕು.

ಚಿನ್ನ/ಬೆಳ್ಳಿ ಮೌಲ್ಯಮಾಪನ: ಹುಂಡಿಯಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಎಣಿಕೆ ನಡೆದ ದಿನವೇ ಜಿಲ್ಲಾ ಅಥವಾ ಉಪ-ವಿಭಾಗದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೌಲ್ಯಮಾಪನ ಮಾಡಿಸಬೇಕು.

4. ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ ಮತ್ತು ಖಾಸಗಿ ವ್ಯಕ್ತಿಗಳಿಗೆ ನೋ ಎಂಟ್ರಿ:
ಸ್ವಂತ ಹಣ ಘೋಷಣೆ ಕಡ್ಡಾಯ: ಎಣಿಕೆ ಕೊಠಡಿಗೆ ಪ್ರವೇಶಿಸುವ ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ಕಡ್ಡಾಯಗೊಳಿಸಲಾಗಿದೆ. ಒಳಹೋಗುವ ಮುನ್ನ ಸಿಬ್ಬಂದಿ ತಮ್ಮ ಬಳಿ ಇರುವ ಸ್ವಂತ ಹಣವನ್ನು ಘೋಷಿಸಿಕೊಳ್ಳಬೇಕು.

ಖಾಸಗಿಯವರಿಗೆ ನಿಷೇಧ: ಹುಂಡಿ ಎಣಿಕೆ ಕಾರ್ಯಕ್ಕೆ ಸಾರ್ವಜನಿಕರನ್ನು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳನ್ನು ಬಳಸುವಂತಿಲ್ಲ. ಕೇವಲ ಸರ್ಕಾರಿ, ಬ್ಯಾಂಕ್ ಹಾಗೂ ಗೃಹರಕ್ಷಕ ಸಿಬ್ಬಂದಿ ಮಾತ್ರ ಇದರಲ್ಲಿ ಪಾಲ್ಗೊಳ್ಳಬೇಕು.

ಸಂಪೂರ್ಣ ವಿಡಿಯೋ ಶೂಟಿಂಗ್: ಹುಂಡಿ ಸ್ಥಳಾಂತರ, ಹಣ ಹೊರತೆಗೆಯುವುದು ಹಾಗೂ ಪ್ರತಿಯೊಬ್ಬ ಸಿಬ್ಬಂದಿ ಎಣಿಕೆ ಮುಗಿಸಿ ಹೊರಬರುವವರೆಗೆ ದಿನಾಂಕ ಮತ್ತು ಸಮಯ ದಾಖಲಾಗುವಂತೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು.

ಅಧಿಕಾರಿಗಳೇ ನೇರ ಹೊಣೆ: ಹುಂಡಿ ಎಣಿಕೆ ಸಮಯದಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ರೀತಿಯ ಕಳ್ಳತನ, ಹಣ ದುರ್ಬಳಕೆ ಪ್ರಕರಣ ಕಂಡುಬಂದರೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಸರ್ಕಾರದ ಈ ಹೊಸ ಕ್ರಾಂತಿಕಾರಕ ಮಾರ್ಗಸೂಚಿಗಳಿಂದಾಗಿ ರಾಜ್ಯದ ಮುಜರಾಯಿ ದೇವಾಲಯಗಳ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಬರಲಿದ್ದು, ಭಕ್ತರು ದೇವರಿಗೆ ಅರ್ಪಿಸುವ ಕಾಣಿಕೆಗೆ ಸಂಪೂರ್ಣ ಭದ್ರತೆ ಸಿಗಲಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್