Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಎಂ ಪಟ್ಟದ ಜಿದ್ದಾಜಿದ್ದಿನ ಆಟಕ್ಕೆ ಇತಿಶ್ರೀ ಹಾಡಲು ಅಖಾಡಕ್ಕಿಳಿದ ಎಐಸಿಸಿ ವರಿಷ್ಠರು

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ಮಹಾ ರಾಜಕೀಯ ಕ್ಷಿಪ್ರ ಕ್ರಾಂತಿಯೊಂದು ಶುರುವಾದ ಲಕ್ಷಣಗಳು ಕಾಣಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಕುರ್ಚಿಗಾಗಿ ತೆರೆಮರೆಯಲ್ಲಿ ನಡೆಯುತ್ತಿದ್ದ
'ಪಟ್ಟದ ಪಗಡೆಯಾಟ'ಕ್ಕೆ ಈಗ ಹೈಕಮಾಂಡ್ ಬಿಗ್ ಟ್ವಿಸ್ಟ್ ನೀಡಿದೆ. ರಾಜ್ಯ ಕಾಂಗ್ರೆಸ್‌ನ ನಾಯಕತ್ವದ ಜಿದ್ದಾಜಿದ್ದಿನ ಆಟಕ್ಕೆ ಇತಿಶ್ರೀ ಹಾಡಲು ಎಐಸಿಸಿ ವರಿಷ್ಠರು ಅಖಾಡಕ್ಕಿಳಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಹೈಕಮಾಂಡ್ ದಿಢೀರ್ ಬುಲಾವ್ ನೀಡಿರುವುದು ಸದ್ಯ ಇಡೀ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ರಾಜಕೀಯದ ಈ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಆದ 'ಕುರ್ಚಿ ಫೈಟ್'-
ಇಷ್ಟು ದಿನ ಕರ್ನಾಟಕದ ನಾಯಕರ ನಡುವೆಯೇ ಸೀಮಿತವಾಗಿದ್ದ ಸಿಎಂ ಸ್ಥಾನದ ಪೈಪೋಟಿ
, ಈಗ ಕಂಪ್ಲೀಟ್ ಆಗಿ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಈ ಕ್ಷಿಪ್ರ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯ ಮುನ್ಸೂಚನೆ ನೀಡುತ್ತಿವೆ.

 ದೆಹಲಿಯಿಂದ ಬಂದ ತುರ್ತು ಕರೆ: ಆಡಳಿತ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ವದಂತಿಗಳು ಜೋರಾಗುತ್ತಿದ್ದಂತೆಯೇ ಎಚ್ಚೆತ್ತ ಹೈಕಮಾಂಡ್, ಇಬ್ಬರೂ ಪ್ರಭಾವಿ ನಾಯಕರನ್ನು ದೆಹಲಿಗೆ ಬರುವಂತೆ ಸೂಚಿಸಿದೆ. ವರಿಷ್ಠರ ಈ ನಡೆ ರಾಜ್ಯ ನಾಯಕರಲ್ಲಿ ಧವಕ ಹೆಚ್ಚಿಸಿದೆ.

ಇದು ಕೇವಲ ಸೌಜನ್ಯದ ಭೇಟಿಯೋ ಅಥವಾ ಕ್ಲೈಮ್ಯಾಕ್ಸ್ ಆಟವೋ?
ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ
, ಈ ಸಿಎಂ ಕುರ್ಚಿ ಫೈಟ್ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಂತೆ ಕಾಣುತ್ತಿದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್:
"ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ
, ಕುರ್ಚಿ ಖಾಲಿ ಇಲ್ಲ" ಎಂಬ ಹೇಳಿಕೆಗಳು ಒಂದೆಡೆ ಕೇಳಿಬರುತ್ತಿದ್ದರೆ, ಮತ್ತೊಂದೆಡೆ 2028ರಲ್ಲೂ ನನ್ನದೇ ನೇತೃತ್ವದಲ್ಲಿ ಸರ್ಕಾರ ಬರಲಿದೆ ಎಂಬ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ವಿಶ್ವಾಸದ ನುಡಿಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದವು.

ಹೈಕಮಾಂಡ್ ಮಾಸ್ಟರ್ ಪ್ಲಾನ್:
ಪಕ್ಷದ ಆಂತರಿಕ ಭಿನ್ನಮತವು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದನ್ನು ಅರಿತಿರುವ ಹೈಕಮಾಂಡ್
, ಈ ಗೊಂದಲಗಳಿಗೆ ದೆಹಲಿಯಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ.

 ಇಡೀ ರಾಜ್ಯದ ಚಿತ್ತ ಈಗ ದೆಹಲಿಯತ್ತ!
ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಮತ್ತು ರಾಜ್ಯದ ಉಭಯ ನಾಯಕರ ನಡುವಿನ ಈ ಹೈವೋಲ್ಟೇಜ್ ಸಭೆಯಲ್ಲಿ ಅಂತಿಮವಾಗಿ ಯಾವ ತೀರ್ಮಾನ ಹೊರಬೀಳಲಿದೆ
? ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಲಿದೆಯೇ ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲು ಹೊಸ ಸೂತ್ರ ಸಿದ್ಧಪಡಿಸಲಿದೆಯೇ? ಎಂಬ ಪ್ರಶ್ನೆಗಳಿಗೆ ಮುಂದಿನ ಕೆಲವು ಗಂಟೆಗಳಲ್ಲಿ ಉತ್ತರ ಸಿಗಬೇಕಿದೆ. ಒಟ್ಟಿನಲ್ಲಿ, ಕರ್ನಾಟಕ ಕಾಂಗ್ರೆಸ್‌ನ ಭವಿಷ್ಯದ ದಿಕ್ಸೂಚಿಯನ್ನು ನಿರ್ಧರಿಸಲು ಹೈಕಮಾಂಡ್ ಒಂದೆಜ್ಜೆಯಂತೂ ಮುಂದೆ ಇಟ್ಟಿರುವುದು ಸ್ಪಷ್ಟವಾಗಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST