ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜದ ಗೌರವ, ಏಕತೆ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿರುವ ಹಿರಿಯೂರಿನ ಆದಿ ಜಾಂಬವ ಮಠಕ್ಕೆ ಇದೇ ಭಾನುವಾರ (ಮೇ 17) ಅಟ್ಟಿಕಾ ಗೋಲ್ಡ್ ಬೊಮ್ಮನಹಳ್ಳಿ ಬಾಬು ಅವರು ಭೇಟಿ ನೀಡಲಿದ್ದಾರೆ.
ಮೇ 17ರ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಹಿರಿಯೂರಿನ ಟಿ.ಬಿ ಸರ್ಕಲ್ ಸಮೀಪವಿರುವ ಆದಿ ಜಾಂಬವ ಮಠಕ್ಕೆ ಭೇಟಿ ನೀಡಲಿರುವ ಅವರು, ಶ್ರೀಮಠದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯೂರು ಕ್ಷೇತ್ರದ ಸಾರ್ವಜನಿಕರು, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಅವರು ಪ್ರಕಟಣೆಯ ಮೂಲಕ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
"ರಾಜಕೀಯವೆಂದರೆ ಕೇವಲ ಚುನಾವಣೆಗಳ ಹೋರಾಟವಲ್ಲ…
ಅದು ಜನರ ನಂಬಿಕೆ, ಪ್ರೀತಿ ಮತ್ತು ಹೃದಯಗಳ ಸಂಗಮ. ಆ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಭೇಟಿ ಹಮ್ಮಿಕೊಳ್ಳಲಾಗಿದೆ. ಜನರ ಪ್ರೀತಿ ಮತ್ತು ಬೆಂಬಲವೇ ನಮಗೆ ಶಕ್ತಿ ಹಾಗೂ ಧೈರ್ಯ," ಎಂದು ಅಟ್ಟಿಕಾ ಬೊಮ್ಮನಹಳ್ಳಿ ಬಾಬು ಅವರು ತಿಳಿಸಿದ್ದಾರೆ.
ಕ್ಷೇತ್ರದ ಆತ್ಮೀಯ ಬಂಧುಗಳು, ತಾಯಂದಿರು ಮತ್ತು ಯುವಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಾಗೂ ಆಶೀರ್ವದಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.



