Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್: ತನಿಖಾ ಸಂಸ್ಥೆಗಳು ಹೇಳಿದ ಮೊತ್ತಕ್ಕೆ ಮಾತ್ರ ಖಾತೆ ಸ್ಥಗಿತ ಸೀಮಿತ; ಹೈಕೋರ್ಟ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ಯಾಂಕ್ ಖಾತೆಗಳ ಫ್ರೀಜ್ (ಸ್ಥಗಿತ) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. "ಯಾವುದೇ ತನಿಖಾ ಸಂಸ್ಥೆಗಳು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲು ಸೂಚಿಸಿದರೆ, ಅದು ಅವರು ನಿರ್ದಿಷ್ಟಪಡಿಸಿದ ಮೊತ್ತಕ್ಕೆ ಮಾತ್ರ ಸೀಮಿತವಾಗಿರಬೇಕು. ಇಡೀ ಖಾತೆಯನ್ನು ಫ್ರೀಜ್ ಮಾಡಬಾರದು. ಉಳಿದ ಹಣವನ್ನು ಬಳಸಲು ಗ್ರಾಹಕರಿಗೆ ಬ್ಯಾಂಕುಗಳು ಅವಕಾಶ ನೀಡಬೇಕು" ಎಂದು ಹೈಕೋರ್ಟ್ ಆದೇಶಿಸಿದೆ. 

ಇಂಡಸ್‌ಇಂಡ್ ಬ್ಯಾಂಕ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ ಏನು?:
ಅರ್ಜಿದಾರರೊಬ್ಬರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಗುಜರಾತ್ ಸೈಬರ್ ಕ್ರೈಂ ಪೊಲೀಸರು
15,000 ಹಾಗೂ ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಪೊಲೀಸರು 10,000 ಸೇರಿದಂತೆ ಒಟ್ಟು 25,000 ಮಾತ್ರ ಸ್ಥಗಿತಗೊಳಿಸುವಂತೆ ಇಂಡಸ್‌ಇಂಡ್ ಬ್ಯಾಂಕ್‌ಗೆ ಸೂಚಿಸಿದ್ದರು.

ಆದರೆ, ಬ್ಯಾಂಕ್ ಮಾತ್ರ "ಮುಂದಿನ ದಿನಗಳಲ್ಲಿ ಬೇರೆ ತನಿಖಾ ಸಂಸ್ಥೆಗಳಿಂದಲೂ ಇಂತಹ ಸೂಚನೆ ಬರಬಹುದು" ಎಂಬ ಮುನ್ನೆಚ್ಚರಿಕೆ ಹಾಗೂ ಆಡಳಿತಾತ್ಮಕ ಅನುಕೂಲದ ನೆಪವೊಡ್ಡಿ ಇಡೀ ಬ್ಯಾಂಕ್ ಖಾತೆಯನ್ನೇ ಬ್ಲಾಕ್ (ಫ್ರೀಜ್) ಮಾಡಿತ್ತು. ಇದನ್ನು ಪ್ರಶ್ನಿಸಿ ಗ್ರಾಹಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ಅವಲೋಕನಗಳು:
ನಾಗರಿಕರ ಹಕ್ಕುಗಳಿಗೆ ಧಕ್ಕೆ: "ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರಿಂದ ಖಾತೆದಾರರ ದೈನಂದಿನ ಖರ್ಚು
, ಉದ್ಯೋಗ ವಹಿವಾಟು, ಒಪ್ಪಂದದ ಬಾಧ್ಯತೆಗಳು ಹಾಗೂ ಶಾಸನಬದ್ಧ ತೆರಿಗೆ ಪಾವತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ನಾಗರಿಕರ ಆರ್ಥಿಕ ಹಕ್ಕನ್ನು ಕಸಿದುಕೊಂಡಂತೆ."

ಊಹಾಪೋಹದ ಮೇಲೆ ಕ್ರಮ ತಪ್ಪು: "ಮುಂದೆ ನಿರ್ದೇಶನ ಬರಬಹುದು ಎಂಬ ಊಹೆಯ ಮೇಲೆ ಅಥವಾ ಬ್ಯಾಂಕಿನ ಆಡಳಿತಾತ್ಮಕ ಅನುಕೂಲಕ್ಕಾಗಿ ಕಾನೂನನ್ನು ಮೀರಲು ಸಾಧ್ಯವಿಲ್ಲ. ತನಿಖಾ ಸಂಸ್ಥೆಗಳಿಂದ ಹೆಚ್ಚುವರಿ ಆದೇಶ ಬಂದರೆ ಆಗ ಬ್ಯಾಂಕ್ ಕ್ರಮ ಕೈಗೊಳ್ಳಲಿ. ಅಲ್ಲಿಯವರೆಗೆ ಬಂದಿರುವ ಆದೇಶದ ವ್ಯಾಪ್ತಿಗೆ ಮಾತ್ರ ಬ್ಯಾಂಕ್ ಸೀಮಿತವಾಗಿರಬೇಕು."

ಸಮತೋಲನ ಅಗತ್ಯ: ತನಿಖೆಯ ಹಿತಾಸಕ್ತಿ ಮತ್ತು ಖಾತೆದಾರರ ಹಕ್ಕುಗಳ ನಡುವೆ ಬ್ಯಾಂಕುಗಳು ಜಾಗರೂಕತೆಯಿಂದ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ನೆನಪಿಸಿದೆ.

ಬ್ಯಾಂಕುಗಳಿಗೆ ಕೋರ್ಟ್ ನೀಡಿದ ಸ್ಪಷ್ಟ ಸಂದೇಶ:
"ಬ್ಯಾಂಕುಗಳು ತನಿಖಾ ಸಂಸ್ಥೆಗಳಿಂದ ಸ್ವೀಕರಿಸಿದ ನಿರ್ದೇಶನಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸಬೇಕು. ತನಿಖಾ ಸಂಸ್ಥೆಗಳು ಕೇಳಿದ ಮೊತ್ತವನ್ನು ಮಾತ್ರ
'ಹೋಲ್ಡ್' ನಲ್ಲಿಟ್ಟು, ಖಾತೆಯಲ್ಲಿರುವ ಉಳಿದ ಕಾನೂನುಬದ್ಧ ಹಣವನ್ನು ಗ್ರಾಹಕರು ಬಳಸಲು ಬ್ಯಾಂಕುಗಳು ಕಡ್ಡಾಯವಾಗಿ ಅನುಮತಿ ನೀಡಬೇಕು."

ಸೈಬರ್ ಅಪರಾಧಗಳ ತನಿಖೆಯ ಹೆಸರಿನಲ್ಲಿ ಇಡೀ ಬ್ಯಾಂಕ್ ಖಾತೆಯನ್ನೇ ಫ್ರೀಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಬ್ಯಾಂಕುಗಳ ಧೋರಣೆಗೆ ಈ ಆದೇಶದ ಮೂಲಕ ಬ್ರೇಕ್ ಬಿದ್ದಂತಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.