ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಮತ್ತು ಇನ್ನರ್ ವಿಲ್ ಕ್ಲಬ್ ನ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಏಪ್ರಿಲ್ 26ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಚಿತ್ರದುರ್ಗದ ರೋಟರಿ ಬಾಲಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ನೂತನ ಉಪಾಧ್ಯಕ್ಷೆ ಡಾ.ಚಾಂದಿನಿ ಖಲೀದ್ ಅವರ "ಹುಡುಕಾಟ ಶುರುವಾಗಿದೆ" ಕವನ ಸಂಕಲನ ಮತ್ತು ಚುಟುಕು ಕವಿಗೋಷ್ಠಿ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗದ ಖ್ಯಾತ ವಕೀಲರಾದ ಬಿ.ಕೆ.ರಹಮತ್ ಉಲ್ಲಾ ನೆರವೇರಿಸಲಿದ್ದಾರೆ.
"ಸಮಾನತೆಯ ಹಾದಿಯಲ್ಲಿ ಅಂಬೇಡ್ಕರ್ ಚಿಂತನೆಗಳು" ಎಂಬ ವಿಷಯವಾಗಿ ಡಾ.ಪಿ.ಆರಡಿ ಮಲ್ಲಯ್ಯಕಟ್ಟೇರ ವಿಶೇಷ ಉಪನ್ಯಾಸ ನೀಡಲಿದ್ದು ಕವನ ಸಂಕಲನದ ಕುರಿತು ರಂಗನಾಯ್ಕ ಮಾತನಾಡಲಿದ್ದು ಅಧ್ಯಕ್ಷತೆಯನ್ನು ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷೆ ವೀಣಾ ಜಯರಾಮ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶೋಭಾ ರಾಮಚಂದ್ರ ಪಾಲ್ಗೊಳ್ಳಲಿದ್ದು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾವತಿ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡುವರು.
ವೇದಿಕೆಯ ನೂತನ ಉಪಾಧ್ಯಕ್ಷೆ ಡಾ.ಚಾಂದಿನಿ ಖಲೀದ್, ಡಾ.ಬಸವರಾಜ ಹರ್ತಿ, ಮೀರಾ ನಾಡಿಗ್ ಸೇರಿದಂತೆ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಹ ನಡೆಯಲಿದ್ದು ಚುಟುಕು ಕವಿಗೋಷ್ಠಿಯಲ್ಲಿ ಐವತ್ತಕ್ಕೂ ಹೆಚ್ಚು ಕವಿಗಳು ತಮ್ಮ ಚುಟುಕುಗಳನ್ನು ವಾಚನ ಮಾಡಲಿದ್ದಾರೆ ಎಂದು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷೆ ಶಾರದಾ ಬಿ.ಜೈರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ ಮಾಹಿತಿ ನೀಡಿದ್ದಾರೆ.


